ಬೆಳಗಾವಿ, 4- ಖಾನಾಪುರದಲ್ಲಿ ತಂಗಿಯ ಮಗಳ ತೊಟ್ಟಿಲು ಹಾಕುವ ಕಾರ್ಯಕ್ರಮ ಮುಗಿಸಿ ಬೆಳಗಾವಿ ಮೂಲಕ ಧಾರವಾಡಕ್ಕೆ ಮರಳುತ್ತಿದ್ದ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳ ಸಮೇತ ಕಾಣೆಯಾಗಿದ್ದಾರೆ.
ಧಾರವಾಡದ ಕಲ್ಯಾಣ ನಗರದ 9ನೇ ಕ್ರಾಸ್ನ ನಿವಾಸಿ ಹೀನಾ ಕೌಸರ ಮೊಹಿನುದ್ದೀನ ಶಿಬಾರಗಟ್ಟಿ (30), ಮಕ್ಕಳಾದ ಅಹ್ಮದ (7), ಅಕ್ಸಾ (6) ಕಾಣೆಯಾಗಿದ್ದಾರೆ. ಜನವರಿ 17 ರಂದು ಧಾರವಾಡದಿಂದ ಖಾನಾಪುರದಲ್ಲಿ ತಮ್ಮ ತಂಗಿಯ ಮಗಳ ತೊಟ್ಟಿಲು ಹಾಕುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಇವರು ಕಾರ್ಯಕ್ರಮ ಮುಗಿಸಿ ಜ.21ರಂದು ಮರಳಿ ಧಾರವಾಡಕ್ಕೆ ತೆರಳಲು ಬೆಳಗಾವಿಗೆ ಬಂದು ಕೇಂದ್ರ ಬಸ್ ನಿಲ್ದಾಣದಿಂದ ಬಸ್ನಲ್ಲಿ ಕುಳಿತಿದ್ದರು. ಇದಾದ ಬಳಿಕ ಅವರು ಮನೆಗೆ ಮರಳಿ ಬಂದಿಲ್ಲ ಎಂದು ಕಾಣೆಯಾಗಿರುವ ಮಹಿಳೆಯ ಪತಿ ಮೊಹಿನುದ್ದೀನ ಮಹ್ಮದಹನೀಫ ಶಿಬಾರಗಟ್ಟಿ ಬೆಳಗಾವಿ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.