ಕೋಲ್ಕತ್ತಾ: 20- ಆ ವೇದಿಕೆಯ ಮೇಲೆ ಐದು ಜನ ಬಿಜೆಪಿ ಮುಖಂಡರಿದ್ದಾರೆ. ಅದರಲ್ಲೊಬ್ಬ ಭಾಷಣ ಮಾಡುತ್ತಿದ್ದಾರೆ. ಒಬ್ಬನೇ ಒಬ್ಬ ಪ್ರೇಕ್ಷಕ ಕೊಡೆ ಹಿಡಿದು ಕುಳಿತಿದ್ದಾನೆ, ಈ ಚಿತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ಸಂಸದ ಶಶಿ ತರೂರ ಬಿಜೆಪಿಗರ ಕಾಲೆಳಿದಿದ್ದಾರೆ.
“ಐದು ಜನ ವೇದಿಕೆಯಲ್ಲಿದ್ದಾರೆ. 7 ಜನ ಮುಖಂಡರ ಚಿತ್ರಗಳು ಪೋಸ್ಟರ್ನಲ್ಲಿವೆ. ಒಬ್ಬನೇ ಪ್ರೇಕ್ಷಕ. ಅಲ್ಲದೇ ಇದು ಕೇರಳವೂ ಅಲ್ಲ, ಬಿಜೆಪಿ ಪಕ್ಷದ ಕತೆ ಮುಗಿಯಿತು” ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಇದೇ ಚಿತ್ರವನ್ನು ಟ್ವೀಟ್ ಮಾಡಿರುವ ಗಬ್ಬರ್ ಎನ್ನುವವರು ” ಪಶ್ಚಿಮ ಬಂಗಾಳ ಚುನಾವಣೆಯ ಬಿಜೆಪಿಯ ಬೃಹತ್ ರ್ಯಾಲಿ” ಎಂಬ ವ್ಯಂಗ್ಯ ಶೀರ್ಷಿಕೆ ನೀಡಿದ್ದಾರೆ.
ಬಂಗ್ಲರ್ ಗೊರ್ಬೊ ಮಮತಾ ಎಂಬ ಅಧಿಕೃತ ಟ್ವಿಟರ್ ಖಾತೆಯಿಂದಲೂ ಈ ಚಿತ್ರವನ್ನು ಪೋಸ್ಟ್ ಮಾಡಲಾಗಿದ್ದು, ಇದು ಪಶ್ಚಿಮ ಬಂಗಾಳ ಬಿಜೆಪಿಯ ಪರಿಸ್ಥಿತಿ. ಬಂಗಾಳ ಬಿಜೆಪಿಯನ್ನು ತಿರಸ್ಕರಿಸುತ್ತದೆ ಎಂದು ಬರೆಯಲಾಗಿದೆ. ಈ ಚಿತ್ರವನ್ನು ನೂರಾರು ಜನ ಹಂಚಿಕೊಂಡಿದ್ದಾರೆ.
ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾರ ಭಾವಚಿತ್ರಗಳನ್ನು ಹಾಕಲಾಗಿದೆ. ಒಟ್ಟಿನಲ್ಲಿ ಬಂಗಾಳದಲ್ಲಿ ಬಿಜೆಪಿ ರ್ಯಾಲಿಗೆ ಜನವೇ ಇಲ್ಲ ಎಂಬುದನ್ನು ಈ ಚಿತ್ರ ಸಾರುತ್ತದೆ. ಇದನ್ನು ಪೋಸ್ಟ್ ಮಾಡಿ ಬಿಜೆಪಿಯನ್ನು ಟ್ರೋಲ್ ಮಾಡಲಾಗುತ್ತಿದೆ.