ಬೆಂಗಳೂರು, 14- 1953 ರ ಈ ದಿನದಂದು ನಿವೃತ್ತರಾದ ಭಾರತೀಯ ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಸೇವೆಗಳನ್ನು ಗುರುತಿಸಿ ಈ ದಿನವನ್ನು ಹಿರಿಯ ಯೋಧರ ದಿನವಾಗಿ ಆಚರಿಸಲಾಗುತ್ತಿದ್ದು ಅದರಂತೆ ಭಾರತೀಯ ಸಶಸ್ತ್ರ ಪಡೆಗಳು ಇಂದು ಹಿರಿಯ ಯೋಧರ ದಿನ ಆಚರಿಸಿದವು .
ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಗುರುವಾರ ಬೆಂಗಳೂರಿನ ವಾಯುಪಡೆಯ ಕೇಂದ್ರದಲ್ಲಿ ನಡೆದ ಹಿರಿಯ ಯೋಧರ ಸಭೆಯಲ್ಲಿ ಭಾಗವಹಿಸಿದರು.
ದಿಟ್ಟ ಸೈನಿಕರ ಕುಟುಂಬಗಳಿಗೆ ನಮ್ಮ ಬೆಂಬಲವನ್ನು ತೋರಿಸಲು ‘ಪುಷ್ಪಮಾಲೆ ಇರಿಸುವ ಸಮಾರಂಭ ಮತ್ತು ಹಿರಿಯ ಸೈನಿಕರ ಸಭೆ ನಡೆಯಿತು .
ಯೋಧರ ಕುಟುಂಬಗಳು, ಹಿರಿಯ ಯೋಧರು ಮತ್ತು ವಿವಿಧ ಮಾಜಿ ಸೈನಿಕರ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.