ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹೆಲಿಕಾಪ್ಟರ್ ಸದ್ದಿಗೆ ಎಮ್ಮೆ ಸಾವು : ಪೊಲೀಸರಿಗೆ ದೂರು

ಜೈಪುರ : ಮನೆಯ ಮೇಲೆ ಹೆಲಿಕಾಪ್ಟರ್ ಹಾರಿದಾಗ ಸದ್ದಿಗೆ ಕೊಟ್ಟಿಗೆಯಲ್ಲಿದ್ದ ಎಮ್ಮೆ ಶಬ್ದಕ್ಕೆ ಹೆದರಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದೆ ಎಂದು ಪರಿಹಾರ ಕೊಡಿಸಬೇಕು ಎಂದು ಎಮ್ಮೆ ಮಾಲೀಕ ಆಗ್ರಹಿಸಿದ್ದ ಘಟನೆ ಬೆಹ್ರೋರ​ ಜಿಲ್ಲೆಯಲ್ಲಿ ನಡೆದಿದೆ.

ಗ್ರಾಮದಲ್ಲಿ ಪುಷ್ಪವೃಷ್ಟಿಗೆಂದು 10 ಮೀಟರ್​ ಎತ್ತರದಲ್ಲಿ ಹೆಲಿಕಾಪ್ಟರ್​ ಹಾರಿಸಲಾಗಿದೆ. ಇಷ್ಟು ಕಡಿಮೆ ಎತ್ತರದಲ್ಲಿ ಹಾರಿಸಿದ್ದಕ್ಕೆ ದೊಡ್ಡ ಸದ್ದಿನಿಂದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಎಮ್ಮೆ ಪ್ರಾಣ ಕಳೆದುಕೊಂಡಿದೆ.

ಇದಕ್ಕೆ ಪೈಲಟ್​ ನಿರ್ಲಕ್ಷ್ಯವೇ ಕಾರಣವಾಗಿದೆ. ಎಮ್ಮೆಯನ್ನು ಕೊಡಿಸಿ ಇಲ್ಲವೇ, ಹಣ ನೀಡಿ ಎಂದು ರೈತ ಬೇಡಿಕೆ ಇಟ್ಟಿದ್ದಾನೆ.

ಈ ಬಗ್ಗೆ ದೂರು ಪಡೆದಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಎಮ್ಮೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿದುಬರಲಿದೆ. ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.