ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವೃದ್ಧರನ್ನು ಗುರಿ ಮಾಡಿ ಹಣ ದೋಚುತ್ತಿದ್ದ ಜೋಡಿಯ ಬಂಧನ

ಬೆಂಗಳೂರು: ವೃದ್ಧರನ್ನು ಗುರಿ ಮಾಡಿ ಫೇಸ್ ಬುಕ್ ಮೂಲಕ ಪರಿಚಯಿಸಿಕೊಂಡು ಲಕ್ಷಾಂತರ ರೂಪಾಯಿ ಹಣ ದೋಚಿ ಪರಾರಿಯಾಗುತ್ತಿದ್ದ ಅಪಾಯಕಾರಿ ಜೋಡಿಯನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ರೀತುಶ್ರೀ ಅಲಿಯಾಸ್ ಸುಷ್ಮಿತಾ ರಾಜ್ ಹಾಗೂ ಸಂತೋಷ ಬಂಧಿತ ಆರೋಪಿಗಳು. ನಕಲಿ ಫೇಸಬುಕ್ ಖಾತೆ ತೆರೆದು ಮುಖಪುಟಗಳಿಗೆ ಬೇರೆ ಬೇರೆ ಫೋಟೋ ಎಡಿಟ್ ಮಾಡಿ ವೃದ್ಧರನ್ನು, ವಯಸ್ಸಾದವರನ್ನೇ ಗುರಿ ಮಾಡುತ್ತಿದ್ದರು.

ಹೀಗೆ ವಯಸ್ಸಾದವರನ್ನೇ ಟಾರ್ಗೆಟ್ ಮಾಡಿ, ರಿತುಶ್ರೀ ತನ್ನ ಗಂಡ ವಿದೇಶದಲ್ಲಿದ್ದಾನೆ. ನನ್ನನ್ನು ಬಿಟ್ಟು ಎರಡು ವರ್ಷವಾಗಿದೆ. ಕೆಲಸವೂ ಸಿಗುತ್ತಿಲ್ಲ. ನನಗೆ ಚಿಕ್ಕ ಮಗುವಿದೆ. ಜೀವನ ನಡೆಸುವುದು ಕಷ್ಟವಾಗಿದೆ. ನಾನು ವಿಚ್ಛೇಧನಕ್ಕಾಗಿ ಅರ್ಜಿ ಹಾಕಿದ್ದು, ಸದ್ಯದಲ್ಲೇ ನನಗೆ ಸೆಟ್ಲಮೆಂಟ್ ಆಗುತ್ತೆ. 20 ಲಕ್ಷಕ್ಕೂ ಹೆಚ್ಚು ಹಣ ಬರಲಿದೆ. ಆಗ ವಾಪಸ್ ಕೊಡ್ತೀನಿ ಸದ್ಯಕ್ಕೆ ಸ್ವಲ್ಪ ಹಣ ಕೊಡುವಂತೆ ಹೇಳಿ ಹಣ ಪಡೆಯುತ್ತಿದ್ದಳಂತೆ. ಹೀಗೆ ಕಥೆ ಹೇಳಿ ಚೌಡಪ್ಪ ಎಂಬುವವರಿಂದ 10 ಲಕ್ಷ ರೂಪಾಯಿ ಪಡೆದಿದ್ದ ರಿತುಶ್ರೀ ಪರಾರಿ ಆಗಿದ್ದಳು. ಹೀಗೆ ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಚೌಡಪ್ಪ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು, ಇದೀಗ ಈಶಾನ್ಯ ವಿಭಾಗದ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.