ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮೃತ ವ್ಯಕ್ತಿಯ ವಿವಾಹೇತರ ಸಂಬಂಧದ ಮಕ್ಕಳಿಗೂ ಪರಿಹಾರದ ಹಕ್ಕು -ಹೈಕೋರ್ಟ

ಬೆಂಗಳೂರು:  ಮೃತನ ವಿವಾಹೇತರ ಸಂತಾನಕ್ಕೂ ಪರಿಹಾರದಲ್ಲಿ ಹಕ್ಕು ಇದೆ ನ್ಯಾಯಮೂರ್ತಿ ಎ.ಪಿ. ಸಂದೇಶ ಅವರಿದ್ದ ಹೈಕೋರ್ಟ ಪೀಠ ಆದೇಶ ನೀಡಿದೆ. ಮೋಟಾರು ವಾಹನ ಅಪಘಾತದಲ್ಲಿ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.


2012 ರಲ್ಲಿ ಮಲ್ಲಿಕಾರ್ಜುನ ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದರು. ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಮತ್ತು ಪುತ್ರ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಗೆ ಪರಿಹಾರದ ಹಕ್ಕು ಇಲ್ಲ. ಆದರೆ, ಆ ಸಂಬಂಧದ ಕಾರಣ ಹುಟ್ಟಿದ ಪುತ್ರನಿಗೆ ಪರಿಹಾರದಲ್ಲಿ ಹಕ್ಕಿದೆ. ಮೃತನ ತಂದೆ ತಾಯಿಗೆ ಪರಿಹಾರದ ತಲಾ ಶೇಕಡ 30ರಷ್ಟು ನೀಡಬೇಕು. ಮೃತನ ಪುತ್ರನಿಗೆ ಪರಿಹಾರದ ಶೇಕಡ 40ರಷ್ಟು ನೀಡಬೇಕು ಎಂದು ವಿಮಾ ಕಂಪನಿಗೆ ಹೈಕೋರ್ಟ ಏಕ ಸದಸ್ಯ ಪೀಠ ನಿರ್ದೇಶನ ನೀಡಿದೆ.

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.