ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳ್ಳಂ ಬೆಳಗ್ಗೆ ಹಾವೇರಿ ಬಸ್ ನಿಲ್ದಾಣದಲ್ಲಿ ಬಸ್ಸುಗಳನ್ನು ತಡೆದು ದಿಢೀರ ಪ್ರತಿಭಟನೆ…

ಹಾವೇರಿ:ನಗರದ  KSRTC ಬಸ್ ನಿಲ್ದಾಣದಲ್ಲಿ ದಿಢೀರನೆ ಬಸ್ಸುಗಳನ್ನು ತಡೆದು,ಸರಕಾರಿ ನೌಕರರು & ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿದರು.

ಬಸ್ಸುಗಳು ಸರಿಯಾದ ಸಮಯಕ್ಕೆ ಬರದ ಹಿನ್ನೆಲೆ ದಿಢೀರನೆ ಪ್ರತಿಭಟನೆಯನ್ನು ಕೈಗೊಂಡರು.ಹಾವೇರಿ ಟು ಹಾನಗಲ್ ಮಾರ್ಗದ ಸರಕಾರಿ ಬಸ್ಗಳ ನಿತ್ಯ ಸಮಸ್ಯೆಗಾಗಿ ಸಾರಿಗೆ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ನೌಕರರು & ಸ್ಟೂಡೆಂಟ್ಸ್.
ಬಸ್ ನಿಲ್ದಾಣದಿಂದ ಬಸ್ಗಳು ಹೊರ ಹೋಗದಂತೆ ತಡೆದು ಪ್ರೊಟೆಸ್ಟ್.
ಕೆಲಕಾಲ ಹಾವೇರಿ KSRTC ಬಸ್ ನಿಲ್ದಾಣದಲ್ಲೇ ನಿಂತಿರೋ ಬಸ್ಗಳು..
ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಸುತ್ತಮುತ್ತ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದ ಪ್ರತಿಭಟನಾಕಾರರು. ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಹರಸಾಹಸಪಟ್ಟರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದೆ ತೆಗೆದುಕೊಂಡರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.