ಬೆಂಗಳೂರು: ಬ್ರಿಟನ್ನಿನಲ್ಲಿದ್ದಾಗ ಸಾವರ್ಕರ್ ಗೋ ಮಾಂಸ ತಿಂದಿದ್ದರು, ಅವರು ಗೋಪೂಜೆಯನ್ನು ವಿರೋಧಿಸುತ್ತಿದ್ದರು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗೋವು ಮಾತೆಯಲ್ಲ, ಅದು ಅದರ ಕರುವಿನ ಮಾತೆ ಎಂದು ಸಾವರ್ಕರ ಹೇಳಿದ್ದರು.
ಭಗತ ಸಿಂಗ್ ನಿಜವಾದ ದೇಶಭಕ್ತರು, ಸಾವರ್ಕರ ಅಲ್ಲ. ರವಿಕುಮಾರ ಇದರ ಇತಿಹಾಸವನ್ನು ಓದಿಕೊಳ್ಳಲಿ ಎಂದಿದ್ದಾರೆ.
ಇನ್ನು ಜನೋತ್ಸವ ಮಾಡಲು ಸರ್ಕಾರದ ಪ್ರಯತ್ನ ನಡೆದಿತ್ತು. ಜನರ ಆಕ್ರೋಶದಿಂದ ಎರಡು ಮೂರು ಬಾರಿ ಮುಂದೂಡಿಕೆಯಾಗಿದೆ. ಇದೀಗ ಜನೋತ್ಸವ ಬಿಟ್ಟು ಸಾವರ್ಕರ ಉತ್ಸವ ಮಾಡುತ್ತಿದ್ದಾರೆ. ಬಿಜೆಪಿಯವರದ್ದು ವಾಟ್ಸಪ್ ಯುನಿರ್ಸಿಟಿ ಹಾಗಾಗಿ ಅದರಲ್ಲಿ ಏನೂ ಇರುವುದಿಲ್ಲ ಎಂದು ಕಿಡಿಕಾರಿದ್ದಾರೆ.