ಕಬ್ಬು ತುಂಬಿದ್ದ ಟ್ರ್ಯಾಕ್ಟರಗೆ ಕಾರ್ ಢಿಕ್ಕಿ : ಜಾತ್ರೆಗೆ ಹೊರಟಿದ್ದ 4 ಯುವಕರ ಸಾವು

A B Dharwadkar
ಕಬ್ಬು ತುಂಬಿದ್ದ ಟ್ರ್ಯಾಕ್ಟರಗೆ ಕಾರ್ ಢಿಕ್ಕಿ : ಜಾತ್ರೆಗೆ ಹೊರಟಿದ್ದ 4 ಯುವಕರ ಸಾವು

ಜಮಖಂಡಿ , 3: ಕಾರೊಂದು ನಿಲ್ಲಿಸಿದ್ದ ಕಬ್ಬು ತುಂಬಿದ್ದ ಟ್ರ್ಯಾಕ್ಟರಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಮಖಂಡಿ ತಾಲೂಕಿನಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.

ವಿಶ್ವನಾಥ (17), ಪ್ರವೀಣ (22), ಗಣೇಶ (20) ಮತ್ತು ಪ್ರಜ್ವಲ್ (17) ಮೃತಪಟ್ಟವರು. ಇವರೆಲ್ಲರೂ ಸಿದ್ದಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ.

ಸಿದ್ದಾಪುರ ಗ್ರಾಮದಿಂದ ನಾಲ್ವರು ಸ್ನೇಹಿತರು ತಡರಾತ್ರಿ ಶಿರೋಳ ಕಾಡಸಿದ್ಧೇಶ್ವರ ದೇವರ ಜಾತ್ರೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಸಿದ್ದಾಪುರ ಬಳಿರುವ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಟ್ರ್ಯಾಕ್ಟರ್ ಕಾರ್ಖಾನೆ ಬಳಿ ನಿಂತಿತ್ತು. ಈ ಟ್ರ್ಯಾಕ್ಟರಗೆ ಅತೀ ವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಅಪ್ಪಳಿಸಿದ ರಬಸಕ್ಕೆ ಕಾರ್ ಟ್ರ್ಯಾಕ್ಟರ್ ನ ಕೆಳಬದಿಗೆ ನುಗ್ಗಿದೆ.

ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.