ಪರಸ್ತ್ರೀಯೊಂದಿಗೆ ಸಲುಗೆ ಬಿಡಿಸಲು ಪತಿಯ ಕಾಲು ಮುರಿಸಿದ ಪತ್ನಿ!

A B Dharwadkar
ಪರಸ್ತ್ರೀಯೊಂದಿಗೆ ಸಲುಗೆ ಬಿಡಿಸಲು ಪತಿಯ ಕಾಲು ಮುರಿಸಿದ ಪತ್ನಿ!

ಕಲಬುರಗಿ: ಪರಸ್ತ್ರೀಯ ಜೊತೆ ಸಲುಗೆಯಿಂದ ಇದ್ದ ಪತಿಯ ಕಾಲು ಮುರಿಯಲು ಆತನ ಪತ್ನಿಯೇ ಸುಪಾರಿ ನೀಡಿದ ನಡೆದಿದೆ.

ಘಟನೆ ಕಲಬುರಗಿ ನಗರದ ಅತ್ತಾರ ಕಂಪೌಡ ಬಳಿಯ ನಿವಾಸಿ ವೆಂಕಟೇಶ ಎಂಬಾತ ಎರಡು ಕಾಲು ಮುರಿತಕ್ಕೆ ಒಳಗಾದ ಪತಿಯಾಗಿದ್ದು, ಸುಪಾರಿ ನೀಡಿದ ಪತ್ನಿ ಉಮಾದೇವಿ ಹಾಗೂ ಹಂತಕರಾದ ಆರೀಫ, ಮನೋಹರ, ಸುನೀಲ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ವೆಂಕಟೇಶ ಕೆಲ ತಿಂಗಳಿನಿಂದ ಮತ್ತೊಬ್ಬ ಮಹಿಳೆಯ ಜೊತೆಗೆ ಸಲುಗೆಯಿಂದ ವರ್ತಿಸುತ್ತಿದ್ದ. ಹೀಗಾಗಿ ದಂಪತಿಗಳ ನಡುವೆ ಹಲವು ಬಾರಿ ಜಗಳವಾಗಿತ್ತು. ಕೊನೆಗೆ ಮಾತು ಕೇಳದ ಪತಿಯ ಎರಡೂ ಕಾಲುಗಳನ್ನು ಮುರಿದರೆ ಮನೆಯಲ್ಲಿಯೇ ಬಿದ್ದಿರುತ್ತಾನೆ ಅಂತಾ ಪತ್ನಿ ಸ್ಕೆಚ್‌ ಹಾಕಿ ಪತಿಯ ಎರಡೂ ಕಾಲುಗಳನ್ನು ಮುರಿಯಲು 5 ಲಕ್ಷಕ್ಕೆ ಸುಪಾರಿ ನೀಡಿದ್ದಳು.

ಆದರೆ ವೆಂಕಟೇಶನ ಮಗ ಇದು ದರೋಡೆ ಪ್ರಕರಣದ ವೇಳೆ ಕಾಲು ಮುರಿದಿದೆ ಎಂದು ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಉಮಾದೇವಿಯ ಅಸಲಿ ಬಣ್ಣ ಬಯಲಾಗಿದೆ. ಸದ್ಯ ಸುಪಾರಿ ನೀಡಿದ ಪತ್ನಿ ಸೇರಿದಂತೆ ಕಾಲು ಮುರಿದ ಆರೋಪಿಗಳನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.