ಬೆಳಗಾವಿ, 7 : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಶಿವಯ್ಯ ಪೂಜಾರಿ, ಮಿತೇಶ ಬಡಿಗೇರ, ಮೋನಪ್ಪ ಪಾಟೀಲ, ಸಂಪತ್ ಕಡೋಲ್ಕರ ಬಂಧಿತರು. ಬಸವಂತ ಅವರ ಸ್ನೇಹಿತ ಮದನ್ ಅವರು ಬೆಳಗಾವಿ ಕ್ಯಾಂಪ್ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ನೀಡಿದ್ದ ದೂರಿನಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.



