ಹೆಂಡತಿಯನ್ನು ಕೊಂದು ನೇಣಿಗೆ ಶರಣಾದ ಗಂಡ

A B Dharwadkar
ಹೆಂಡತಿಯನ್ನು ಕೊಂದು ನೇಣಿಗೆ ಶರಣಾದ ಗಂಡ

ಬೆಳಗಾವಿ : ಹೆಂಡತಿಯನ್ನು ಕೊಡಲಿಯಿಂದ ಕಡಿದು ಗಂಡ ತಾನು ನೇಣಿಗೆ ಶರಣಾದ ಘಟನೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯಲ್ಲವ್ವ( 40 ವರ್ಷ) ಕೊಲೆಯಾದ ಮಹಿಳೆ. ಶಿವಪ್ಪ ಸಣ್ಣಬಸಪ್ಪ ಕಂಬಳಿ (46 ವರ್ಷ)ಎಂಬವ ಕೊಲೆಗೈದವ. ತನ್ನ ಪತ್ನಿಯನ್ನು ಕೊಂದಿರುವ ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯಲ್ಲವ್ವ ಅವರ ತಾಯಿ ಮೃತಪಟ್ಟು ಒಂದು ವಾರ ಕಳೆದಿದ್ದು ಹೀಗಾಗಿ ಧಾರ್ಮಿಕ ವಿಧಿ ವಿಧಾನ ನಡೆಸಲು ಅವರು ತವರಿಗೆ ಹೋಗಬೇಕಾಗಿತ್ತು. ಆದರೆ ಗಂಡ ಅವರಿಗೆ ತವರಿಗೆ ಹೋಗುವುದು ಬೇಡ ಎಂದು ಹೇಳಿದ್ದಾನೆ. ಇದಕ್ಕೆ ಒಪ್ಪದೇ ಇದ್ದಾಗ ಕೊಡಲಿ ತೆಗೆದುಕೊಂಡು ಬಂದ ಗಂಡ ಯಲ್ಲವ್ವ ಅವರ ಕತ್ತು ಮತ್ತು ಬೆನ್ನಿಗೆ ಹೊಡೆದ ಪರಿಣಾಮ ಯಲ್ಲವ್ವ ಮೃತಪಟ್ಟಿದ್ದಾರೆ. ಯಲ್ಲವ್ವಳ ಸಾವಿನಿಂದ ಗಂಡನು ಆತ್ಮಹತ್ಯೆ ಮಾಡಿಕೊಂಡಿದ್ದು ಕಿತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.