ಗೋಕಾಕದಲ್ಲಿ “ಮತ ಕಳ್ಳ ಗದ್ದುಗೆ ಬಿಡು” ಸಹಿ ಸಂಗ್ರಹ ಅಭಿಯಾನ

A B Dharwadkar
ಗೋಕಾಕದಲ್ಲಿ “ಮತ ಕಳ್ಳ ಗದ್ದುಗೆ  ಬಿಡು” ಸಹಿ ಸಂಗ್ರಹ ಅಭಿಯಾನ

ಗೋಕಾಕ, 26 : ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಡಾ. ಮಹಾಂತೇಶ ಕಡಾಡಿಯವರ ನೇತೃತ್ವದಲ್ಲಿ “ಮತ ಕಳ್ಳ ಗದ್ದುಗೆ ಬಿಡು” ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಹಾಂತೇಶ ಕಡಾಡಿಯವರು ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಅಕ್ರಮ ಮತಗಳು ಕಂಡು ಬಂದರೆ ಕೂಡಲೇ ನಮಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಕರೆ ನೀಡಿದರು. ಜೊತೆಗೆ ಗೋಕಾಕ ನಗರದಲ್ಲಿ ಮತದಾರರ ಬೂತ್ ಗಳನ್ನು ಬದಲಾವಣೆ ಮಾಡುವ ಮೂಲಕ ಅತಂತ್ರ ಸ್ಥಿತಿಗೆ ತಂದು ಸಮಸ್ಯೆ ತಂದೊಡ್ಡುತ್ತಿದ್ದಾರೆ. ಇದರ ಬಗ್ಗೆ ಮತದಾರರು ಜಾಗೃತರಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಪೂಜಾರ, ಗೋಕಾಕ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಾಕೀರ ನದಾಫ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.