LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಕಾಕ್ರೋಚ್‌ ಹೀಗೆ ಮಾವು ತಿನ್ನುತ್ತವೆ ಎಂದು ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ ವ್ಯಂಗ್ಯ ವಿಡಿಯೋ ವೈರಲ್‌

ಹೊಸದಿಲ್ಲಿ, ಮೇ 22 : ಬಹುಭಾಷಾ ನಟ ಪ್ರಕಾಶ ಇತ್ತೀಚೆಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದು ಭಾರೀ ವೈರಲ್‌ ಆಗಿದೆ.

ವಿಡಿಯೋದಲ್ಲಿ ಮಾವಿನ ಹಣ್ಣು ತಿನ್ನುತ್ತಾ ಪ್ರಕಾಶ ಮಾಡಿದ ವ್ಯಂಗ್ಯಾತ್ಮಕ ಹೇಳಿಕೆ ಇದೀಗ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2019ರಲ್ಲಿ ನಟ ಅಕ್ಷಯ್ ಕುಮಾರ್‌ ಜತೆ ನಡೆಸಿದ್ದ ಮಾವಿನ ಹಣ್ಣು ಕುರಿತ ಮಾತುಕತೆಯನ್ನು ನೆನಪಿಸಿಕೊಂಡು ಹಲವರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರಕಾಶ, ಐಸ್‌ಕ್ರೀಮ್‌ ಜತೆ ಇಮಾಮ್‌ ಪಸಂದ್‌ ಮಾವಿನ ಹಣ್ಣು ಸೇವಿಸುತ್ತಿರುವುದು ಕಾಣಿಸುತ್ತದೆ. ಈ ವೇಳೆ ಅವರು, ನೋಡಿ ಮೋದಿಜಿ, ಮಾವಿನ ಹಣ್ಣನ್ನು ಹೀಗೆ ಕತ್ತರಿಸಿ, ಐಸ್‌ಕ್ರೀಮ್‌ ಹಾಕಿಕೊಂಡು ಜಿರಳೆಗಳು ಹೀಗೆ ತಿನ್ನುತ್ತವೆ ಎಂದು ವ್ಯಂಗ್ಯವಾಗಿ ಹೇಳಿರುವುದು ಕೇಳಿಬಂದಿದೆ.

ಪ್ರಕಾಶ ಹೇಳಿಕೆಯಲ್ಲಿ ಬಳಸಿರುವ ಜಿರಳೆಗಳು ಎಂಬ ಪದಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಕೆಲವರು ಇದನ್ನು ರಾಜಕೀಯ ವ್ಯಂಗ್ಯ ಎಂದು ಸಮರ್ಥಿಸಿಕೊಂಡಿದ್ದರೆ, ಮತ್ತೂ ಕೆಲವರು ಟೀಕಿಸಿದ್ದಾರೆ.

2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನಟ ಅಕ್ಷಯ್ ಕುಮಾರ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಾವಿನ ಹಣ್ಣು ತಿನ್ನುವ ರೀತಿಯ ಕುರಿತು ಮಾತನಾಡಿದ್ದರು. ಆ ವಿಡಿಯೋ ಆ ಸಮಯದಲ್ಲಿ ವ್ಯಾಪಕ ವೈರಲ್‌ ಆಗಿತ್ತು. ಇದೀಗ ಪ್ರಕಾಶ ವಿಡಿಯೋವನ್ನು ಅದಕ್ಕೆ ಹೋಲಿಕೆ ಮಾಡಲಾಗುತ್ತಿದೆ.

ಪ್ರಕಾಶ ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳ ಕುರಿತು ತಮ್ಮ ನೇರ ಅಭಿಪ್ರಾಯಗಳಿಂದಲೇ ಪದೇಪದೇ ಸುದ್ದಿಯಾಗುತ್ತಿದ್ದು, ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಟೀಕೆ ವ್ಯಕ್ತಪಡಿಸಿದ್ದಾರೆ. ಇದೀಗ ಅವರ ಹೊಸ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

 

 

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮರುಕಳಿಸದು : ಮತ್ತೆ ಭರವಸೆ ನೀಡಿದ ಧರ್ಮೇಂದ್ರ ಪ್ರಧಾನನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ : ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಕಾಕ್ರೋಚ್‌ ಜನತಾ ಪಕ್ಷದ ಆನ್‌ಲೈನ್‌ ಅಭಿಯಾನಮೌಂಟ್‌ ಎವರೆಸ್ಟ ಇಳಿಯುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳ ಸಾವುರಾಷ್ಟ್ರೀಯ ಭದ್ರತೆ ಕಾರಣ ಕಾಕ್ರೋಚ್‌ ಜನತಾ ಪಕ್ಷ ಎಕ್ಸ ಖಾತೆ ನಿರ್ಬಂಧಕಾಕ್ರೋಚ್‌ ಹೀಗೆ ಮಾವು ತಿನ್ನುತ್ತವೆ ಎಂದು ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ ವ್ಯಂಗ್ಯ ವಿಡಿಯೋ ವೈರಲ್‌ದ್ವೇಷ ರಾಜಕಾರಣ ಬೇಡ; ಭಾರತೀಯ ಕುಸ್ತಿ ಒಕ್ಕೂಟಕ್ಕೆ ದಿಲ್ಲಿ ಹೈಕೋರ್ಟ ತೀವ್ರ ತರಾಟೆ : ವಿನೇಶ ಫೋಗಟ್‌ ಅನರ್ಹತೆಗೆ ನಿರ್ಧಾರಕ್ಕೆಬೆಂಗಳೂರಿನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ; 180 ಪ್ರಯಾಣಿಕರು ಸುರಕ್ಷಿತತಲೆಗೆ ಗುಂಡು ಹಾರಿಸಿಕೊಂಡು ಕೆಎಲ್ಇ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ದಿನೇಶ ಭಟ್ಕಳ ಆತ್ಮಹತ್ಯೆಇರಾನ್‌ ಯುದ್ಧದ ಕಾರಣ ಪುತ್ರನ ಮದುವೆಗೂ ಹೋಗಲಾಗುತ್ತಿಲ್ಲ: ಟ್ರಂಪ್‌ಜೂನ್‌ 18ರಂದು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ : ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಮತದಾನ