ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಂಡೆಮಠ ಶ್ರೀ ಆತ್ಮಹತ್ಯೆ; ತಪ್ಪೊಪ್ಪಿಕೊಂಡ ಡಾ.ಮೃತ್ಯುಂಜಯಶ್ರೀ

ಬೆಂಗಳೂರು: ಕಂಚುಗಲ್ ಬಂಡೆಮಠದ ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕಣ್ಣೂರು ಮಠದ ಶ್ರೀಗಳು ತಪ್ಪೊಪ್ಪಿಕೊಂಡಿದ್ದಾರೆ.

ಮಾಗಡಿ ಪೊಲೀಸರು ಆರೋಪಿ ಕಣ್ಣೂರು ಮಠದ ಡಾ.ಮೃತ್ಯುಂಜಯಶ್ರೀಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಈ ವೇಳೆ ಬಸವಲಿಂಗಶ್ರೀಗಳ ವಿಡಿಯೋ ರೆಕಾರ್ಡ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ ಡಾ.ಮೃತ್ಯುಂಜಯ ಸ್ವಾಮೀಜಿಯನ್ನು ಕಣ್ಣೂರು ಮಠಕ್ಕೆ ಕರೆದೊಯ್ದಿರುವ ಮಾಗಡಿ ಪೊಲೀಸರು ಕಣ್ಣೂರು ಮಠದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

ಈ ನಡುವೆ ಬಂಧಿತ ಎಂಜಿನಿಯರಿಂಗ ವಿದ್ಯಾರ್ಥಿನಿ ನೀಲಾಂಬಿಕೆ ವಿಚಾರಣೆ ನಡೆಸಲಾಗುತ್ತಿದ್ದು, ಆಕೆ ಮೊಬೈಲ್ ಪರಿಶೀಲನೆ ನಡೆಸಿದಾಗ ನೀಲಾಂಬಿಕೆಗೆ ಮೊಬೈಲ್ ಬಗ್ಗೆ ಅಪಾರ ಜ್ಞಾನವಿರುವುದು ಗೊತ್ತಾಗಿದೆ. ಅಲ್ಲದೇ 6 ತಿಂಗಳ ಮೊಬೈಲ್ ಡೇಟಾವನ್ನು ಸಂಪೂರ್ಣವಾಗಿ ಡಿಲಿಟ್ ಮಾಡಿರುವ ನೀಲಾಂಬಿಕೆ ಕೆಲ ತಿಂಗಳಿಂದ ಮೊಬೈಲ್ ಉಪಯೋಗಿಸುತ್ತಿರುವುದರ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.