ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬುಧವಾರ ಬೆಳಗಾವಿಯ ರೇಲ್ವೆ ಮೇಲ್ಸೇತುವೆ ಲೋಕಾರ್ಪಣೆ

ಬೆಳಗಾವಿ : ಟಿಳಕವಾಡಿ ಪ್ರದೇಶದ ರೈಲ್ವೆ ಮೂರನೇ ಗೇಟ್ ಬಳಿ ನಿರ್ಮಿಸಿರುವ ವಾಹನ ಮೇಲ್ಸೇತುವೆಯನ್ನು ಇದೇ ಬುಧವಾರ ದಿ.೧೨ ರಂದು ಲೋಕಾರ್ಪಣೆ ಮಾಡಲಾಗುವುದು.

ಅಂದು ಮುಂಜಾನೆ ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಸೇತುವೆಯನ್ನು ನಾಗರಿಕ ಸೇವೆಗೆ ತೆರವುಗೊಳಿಸಲಿದ್ದಾರೆ. ಅವರ ಪತಿ ದಿವಂಗತ, ಕೇಂದ್ರ ಸಚಿವ ಸುರೇಶ ಅಂಗಡಿ 2019ರ ಜನವರಿ 6ರಂದು ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು.



ಈ ಯೋಜನೆಯನ್ನು 27 ಕೋಟಿ 28 ಲಕ್ಷ ರೂಪಾಯಿಯಲ್ಲಿ ಪೂರ್ಣಗೊಳಿಸಲಾಗಿದೆ. ಕೃಷಿ ಇಂಪ್ರಾಟೆಕ್ ನಿರ್ಮಾಣ ಸಂಸ್ಥೆಯು ಈ ಕೆಲಸವನ್ನು ವಹಿಸಿಕೊಂಡಿತ್ತು.

ಹದಿನೈದು ತಿಂಗಳಲ್ಲಿ ಅಂದರೆ 2020ರ ಮಾರ್ಚ ತಿಂಗಳಲ್ಲಿ ಯೋಜನೆ ಪೂರ್ಣಗೊಂಡು ಸೇತುವೆ ಹಸ್ತಾಂತರ ಮಾಡಬೇಕಿತ್ತು. ಆದರೆ ಕೋವಿಡ್ ಕಾರಣ ವಿಳಂಬವಾಯಿತು ಎಂದು ಹೇಳಲಾಗಿದೆ. ರಾಜ್ಯ ಸರಕಾರ ಮತ್ತು ರೈಲ್ವೆ ಇಲಾಖೆ 50:50 ಅನುದಾನದಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ.

ಡಬಲ್ ರೋಡ್ ವ್ಯವಸ್ಥೆಯಲ್ಲಿ ನಿರ್ಮಿಸಲಾಗಿರುವ ಈ ಸೇತುವೆಗೆ ಎರಡೂ ಬದಿಗಳಲ್ಲಿ ಎರಡೆರಡು ರಸ್ತೆ ಹೊಂದಿವೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.