LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಬಸವಣ್ಣನ ತತ್ವಾದರ್ಶಗಳಿಗೆ ವಿರುದ್ಧ ಇರುವ ಬಿಜೆಪಿ ಬಗ್ಗೆ ಲಿಂಗಾಯತರು ಎಚ್ಚೆತ್ತುಕೊಳ್ಳಬೇಕು -ಸತೀಶ

ಬೆಳಗಾವಿ : ಬಿಜೆಪಿಯ ಮೂಲವಾಗಿದ್ದ ರಾಜ್ಯದ ಲಿಂಗಾಯತರಿಗೆ ಈಗ ಆ ಪಕ್ಷ ಎಂತಹದೆಂದು ಅರಿವಾಗಿದೆ ಎಂದು ಶಾಸಕ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.



ಸೋಮವಾರ ಬೆಳಗಾವಿಯ ಪಕ್ಷದ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರ ತತ್ವ, ಆದರ್ಶಗಳಿಗೆ ವಿರುದ್ಧವಾದ ಉದ್ದೇಶಗಳನ್ನು ಹೊಂದಿರುವ ಬಿಜೆಪಿಯನ್ನು ಕಳೆದ ಸುಮಾರು 20 ವರುಷಗಳಿಂದ ಲಿಂಗಾಯತರು ಬೆಂಬಲಿಸಿದ್ದರು. ಯಡಿಯೂರಪ್ಪನವರ ಕಾರಣ ಆ ಪಕ್ಷವನ್ನು ಅಪ್ಪಿಕೊಂಡು ಬಸವಣ್ಣನವರ ತತ್ವ ಸಿದ್ಧಾಂತ ಗಳನ್ನು ಬದಿಗಿಟ್ಟು ಸಮೂಹಸನ್ನಿಗೊಳಗಾದವರಂತೆ

ಬಿಜೆಪಿಯ ತತ್ವ ಆದರ್ಶಗಳನ್ನೇ ಪಾಲಿಸಿ ಅದನ್ನು ಅಧಿಕಾರಕ್ಕೆ ತಂದರು. ಬ್ರಾಹ್ಮಣರ ಪಕ್ಷವಾಗಿದ್ದ ಬಿಜೆಪಿಯನ್ನು ತಮ್ಮದೇ ಪಕ್ಷವಾಗಿ ಮಾಡಿಕೊಂಡರು.



ಆದರೆ 30 ವರುಷದಿಂದ ಹೆಗಲ ಮೇಲೆ ಹೊತ್ತು ಸಾಕಿ ಸಲುಹಿದ ಲಿಂಗಾಯತ ನಾಯಕರಾದ ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್ ಅವರನ್ನು ಬಿಜೆಪಿ ಯಾವ ರೀತಿಯಿಂದ ಸಂಚು ಮಾಡಿ ಅವರು ಪಕ್ಷದಿಂದ ಹೊರ ನಡೆಯುವಂತೆ ಮಾಡಿತು ಎಂಬವುದು ಈಗ ಲಿಂಗಾಯತರಿಗೆ ಅರಿವಾಗುತ್ತಿದ್ದು ಬಿಜೆಪಿ ತಮ್ಮನ್ನು ಹೇಗೆ ಬಳಸಿಕೊಂಡು ಬಿಸಾಡಿತು ಎಂಬುವುದು ಈಗ ಗೊತ್ತಾಗಿದೆ. ಕೇಸರಿ ಪಕ್ಷ ಈಗ ತನ್ನ ನಿಜವಾದ ಬಣ್ಣ ತೋರಿಸಿದೆ ಎಂದು ಅವರು ಹೇಳಿದರು.



ಇನ್ನಾದರೂ ಬಸವಣ್ಣನ ಹಿಂಬಾಲಕರು ಬಿಜೆಪಿ ಮುಂತಾದ ವಂಚಕ, ಸ್ವಾರ್ಥ, ಮನುವಾದಿ ಸಂಘಟನೆ ಪಕ್ಷಗಳಿಂದ ಅಂತರ ಕಾಯ್ದುಕೊಂಡು ಹೋಗುವ ನಿರ್ಧಾರ ಮಾಡಬೇಕೆಂದು ಲಿಂಗಾಯತರು ಮತ್ತು ಬಿಜೆಪಿಯಲ್ಲಿರುವ ಬ್ರಾಹ್ಮನೇತರರಿಗೆ ಕರೆ ನೀಡಿದರು.



ಲಿಂಗಾಯತ ಮುಖಂಡ ಯಡಿಯೂರಪ್ಪರಿಂದ ಅಧಿಕಾರ ಪಡೆದ ಬಿಜೆಪಿ ಅವರನ್ನು ಹೇಗೆ ನಡೆಸಿಕೊಂಡಿತು, ಎಷ್ಟೊಂದು ಕಷ್ಟ ಕೊಟ್ಟಿತು, ಮುಖ್ಯಮಂತ್ರಿ ಸ್ಥಾನದಿಂದ ಹೇಗೆ ತೆಗೆಯಿತು, ಶೆಟ್ಟರ್, ಸವದಿಗೆ ಯಾಕೆ ಟಿಕೆಟ್ ಕೊಡಲಿಲ್ಲವೆಂದು ಲಿಂಗಾಯತರು ಅರಿತುಕೊಳ್ಳಬೇಕು ಎಂದು ಜಾರಕಿಹೊಳಿ ವಿನಂತಿಸಿಕೊಂಡರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣಸಮಾಜದ ಜಟಿಲ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಲಿ: ಡಾ. ಅಲ್ಲಮಪ್ರಭು ಶ್ರೀ