ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಮುಖಕ್ಕೆ ಮಸಿ

ಪುಣೆ: ಡಾ ಬಾಬಾಸಾಹೇಬ ಅಂಬೇಡ್ಕರ, ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಭೈರವ ಪಾಟೀಲ ಅವರ ಬಗ್ಗೆ ಹೇಳಿಕೆ ನೀಡಿದ ಒಂದು ದಿನದ ನಂತರ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮೇಲೆ ಪುಣೆಯ ಪಿಂಪ್ರಿ ಉಪನಗರದಲ್ಲಿ ಶನಿವಾರ ಮಸಿ ಎರಚಲಾಗಿದೆ.

ಪಾಟೀಲ ಮೇಲೆ ಮಸಿ ಎಸೆದ ವ್ಯಕ್ತಿಯನ್ನು ಕೆಳಗೆ ಕೆಡವಿ ಪೊಲೀಸರು ತಕ್ಷಣ ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪಿಂಪ್ರಿ ಚಿಂಚ‌ವಾಡ ಪೊಲೀಸ್ ಕಮಿಷನರ್ ಅಂಕುಶ ಶಿಂಧೆ ತಿಳಿಸಿದ್ದಾರೆ.

ಚಂದ್ರಕಾಂತ ಪಾಟೀಲ ಅವರು ಮೋರ್ಯ ಗೋಸಾವಿ ಹಬ್ಬಕ್ಕೆ ಪಿಂಪ್ರಿ-ಚಿಂಚವಾಡಕ್ಕೆ ಬಂದಿದ್ದರು. ಕಾರ್ಯಕ್ರಮಕ್ಕೆ ತೆರಳುವ ಮುನ್ನ ಕಾರ್ಯಕರ್ತರೊಬ್ಬರ ಮನೆಯಲ್ಲಿ ತಂಗಿದ್ದರು ಎನ್ನಲಾಗಿದೆ. ಕಾರ್ಯಕರ್ತನ ಮನೆಯಿಂದ ಹೊರ ಬಂದ ಕೂಡಲೇ ಚಂದ್ರಕಾಂತ ಪಾಟೀಲ ಮೇಲೆ ಮಸಿ ಎರಚಲಾಯಿತು.

ಪಾಟೀಲ ಶುಕ್ರವಾರ ಸಮಾರಂಭದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ, ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಕರ್ಮವೀರ ಭೈರವ ಪಾಟೀಲ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಗಳು ನಡೆದಿದ್ದವು.

ಬಿಜೆಪಿ ನಾಯಕನ ಕಡೆಗೆ ನೀಲಿ ಶರ್ಟ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಆರೋಪಿಗಳು ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಕಪ್ಪು ಮಸಿ ಎರಚುತ್ತಿರುವುದನ್ನು ಕಾಣಬಹುದು.

ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ, ನಾನು ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ನಾನು ಚಳುವಳಿಯ ಮನುಷ್ಯ, ಯಾರಿಗೂ ಹೆದರುವುದಿಲ್ಲ. ಇದು ಹೇಡಿತನ. ಇದೆಲ್ಲವನ್ನೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನೋಡುತ್ತಾರೆ ಎಂದು ಚಂದ್ರಕಾಂತ ಪಾಟೀಲ ಹೇಳಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.