ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಾರವಾರದಲ್ಲಿ ಕುಡಿಯುವ ನೀರಿನ ಬಾವಿಯಲ್ಲಿ ಬಂತು ಪೆಟ್ರೋಲ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಮಠಾಕೇರಿಯ ಕ್ರಾಸ್ ಸಮೀಪ ಕುಡಿಯುವ ನೀರಿನ ಎರಡು ಬಾವಿಗಳಲ್ಲಿ ಪೆಟ್ರೋಲ್ ಪತ್ತೆಯಾಗಿದೆ.

ಮಠಾಕೇರಿಯ ಗಣಪತಿ ಕಿಣಿ ಮತ್ತು ಸಂತೋಷ ನಾಯ್ಕ ಅವರ ಮಾಲೀಕತ್ವದ ಎರಡು ಬಾವಿಗಳಲ್ಲಿ ಶುದ್ಧ ಕುಡಿಯುವ ನೀರು ದೊರೆಯುತ್ತಿತ್ತು. ಆದರೆ, ಕಳೆದ ಮೂರು- ನಾಲ್ಕು ದಿನಗಳಿಂದ ಪೆಟ್ರೋಲ್ ವಾಸನೆ ಬರಲಾರಂಭಿಸಿದೆ. ಈ ಕುರಿತು ಬಾವಿ ಮಾಲೀಕರು ಪುರಸಭೆಗೆ ದೂರು ನೀಡಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಸಮೀಪದ ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ಸೇರಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.