ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಡಿಕೆಶಿ ಹೇಳಿಕೆ ಖಂಡಿಸಿದ ಯಡಿಯೂರಪ್ಪ

ಮಂಡ್ಯ: ವೋಟರ್ ಐಡಿ ಹಗರಣ ಮುಚ್ಚಿ ಹಾಕಲು ಬಿಜೆಪಿ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಬಳಸಿಕೊಂಡಿತು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿಕೆಗೆ ಬಿಜೆಪಿ ನಾಯಕರು ಮುಗಿಬಿದ್ದು ವಾಗ್ದಾಳಿ ನಡೆಸಿದ್ದಾರೆ.


ಮಂಡ್ಯದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಡಿಕೆಶಿ ತಲೆ ತಿರುಗಿದವರಂತೆ ಮಾತನಾಡ್ತಿದ್ದಾರೆ. ಏನು ಮಾತಾಡಬೇಕು ಅಂತಾ ಡಿಕೆಶಿಗೆ ಗೊತ್ತಾಗ್ತಿಲ್ಲ. ಯಾರ ಪರ ಮಾತನಾಡಬೇಕು ಅನ್ನುವ ಪ್ರಜ್ಞೆ ಇಲ್ಲ. ಡಿಕೆಶಿ ಮಾತು ಅವರಿಗೇ ತಿರುಗು ಬಾಣವಾಗುತ್ತಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ ಅವರ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ರೀತಿ ಮಾತುಗಳನ್ನು ಅವರಿಂದ ನಿರೀಕ್ಷಿಸಿರಲಿಲ್ಲ. ಇಂತಹ ಮಾತುಗಳಿಂದ ಅವರ ಗೌರವವೇ ಹಾಳಾಗುತ್ತದೆ ಎಂದರು.

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.