ಮಂಡ್ಯದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಡಿಕೆಶಿ ತಲೆ ತಿರುಗಿದವರಂತೆ ಮಾತನಾಡ್ತಿದ್ದಾರೆ. ಏನು ಮಾತಾಡಬೇಕು ಅಂತಾ ಡಿಕೆಶಿಗೆ ಗೊತ್ತಾಗ್ತಿಲ್ಲ. ಯಾರ ಪರ ಮಾತನಾಡಬೇಕು ಅನ್ನುವ ಪ್ರಜ್ಞೆ ಇಲ್ಲ. ಡಿಕೆಶಿ ಮಾತು ಅವರಿಗೇ ತಿರುಗು ಬಾಣವಾಗುತ್ತಿದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ ಅವರ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ರೀತಿ ಮಾತುಗಳನ್ನು ಅವರಿಂದ ನಿರೀಕ್ಷಿಸಿರಲಿಲ್ಲ. ಇಂತಹ ಮಾತುಗಳಿಂದ ಅವರ ಗೌರವವೇ ಹಾಳಾಗುತ್ತದೆ ಎಂದರು.








