ನಮ್ಮ ತೆರಿಗೆ ದುಡ್ಡಲ್ಲಿ ಉತ್ತರ ಪ್ರದೇಶ ಜನರ ಬದುಕು: ತಮಿಳುನಾಡು ಸಚಿವ

A B Dharwadkar
ನಮ್ಮ ತೆರಿಗೆ ದುಡ್ಡಲ್ಲಿ ಉತ್ತರ ಪ್ರದೇಶ ಜನರ ಬದುಕು: ತಮಿಳುನಾಡು ಸಚಿವ

ಚೆನ್ನೈ: ತಮಿಳುನಾಡು ತೆರಿಗೆ ರೂಪದಲ್ಲಿ ಕೇಂದ್ರ ಸರಕಾರ‌ಕ್ಕೆ ನೀಡುತ್ತಿರುವ ಹಣದಲ್ಲೇ ಉತ್ತರ ಪ್ರದೇಶ ಜೀವಿಸುತ್ತಿದೆ ಎಂದು ತಮಿಳುನಾಡು ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಹೇಳಿದ್ದಾರೆ. ಪಿಎಂಕೆ ನಾಯಕ ಅನ್ಬುಮಣಿ ರಾಮ­ದಾಸ್‌ “ತಮಿಳುನಾಡಿಗಿಂತ ಉತ್ತರ ಪ್ರದೇಶ ಹೆಚ್ಚು ಅಭಿವೃದ್ಧಿ ಹೊಂದಿದೆ’ ಎಂದು ಈ ಹಿಂದೆ ಹೇಳಿದ್ದರು.

ಈ ಸಂಬಂಧ ರಾಜಾ ಅವರನ್ನು ಸುದ್ದಿಗಾ­ರರು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ರಾಜಾ, “ಉತ್ತರ ಪ್ರದೇಶಕ್ಕೆ ಎಲ್ಲಿಂದ ಹಣ ಬರುತ್ತಿದೆ? ಇದು ಆಂತರಿಕ ಅಭಿವೃ­ದ್ಧಿಯೇ?’ ಎಂದಿದ್ದಾರೆ. ಜತೆಗೆ ಉತ್ತರ ಭಾರತದ ಮಹಿಳೆಯರ ಗುರುತು ಆಕೆಯ ಪತಿಯ ಉದ್ಯೋಗದಿಂದ ಆಗುತ್ತದೆ. ಆದರೆ ತಮಿಳುನಾಡಿನಲ್ಲಿ ಆಕೆಯ ವಿದ್ಯಾಭ್ಯಾಸದಿಂದ ಆಗುತ್ತದೆ’ ಎಂದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.