ತೇಗೂರು ಬಳಿ ಕಾರ್ – ಲಾರಿ ಅಪಘಾತ; 5 ಸಾವು

A B Dharwadkar
ತೇಗೂರು ಬಳಿ ಕಾರ್ – ಲಾರಿ ಅಪಘಾತ; 5 ಸಾವು
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಕಿತ್ತೂರು : ಮುಂದೆ ಹೊರಟಿದ್ದ ಲಾರಿಗೆ ಹಿಂದಿನಿಂದ ರಭಸವಾಗಿ ಕಾರ್ ಡಿಕ್ಕಿ ಹೊಡೆದು ಓರ್ವ ಪಾದಚಾರಿ ಸೇರಿದಂತೆ ಐವರು ಸ್ಥಳದಲ್ಲೇ ಅಸುನೀಗಿದ ಘಟನೆ ಕಿತ್ತೂರು ತಾಲೂಕಿನ ತೇಗೂರು ಗ್ರಾಮದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಗುರುವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ.

ಮೃತರನ್ನು ಕಿತ್ತೂರ ತಾಲ್ಲೂಕಿನ ಅವರಾದಿ ಗ್ರಾಮದ ಮಹಾಂತೇಶ ಬಸಪ್ಪ ಮುದ್ದೋಜಿ, 29, ನಾಗಪ್ಪ ಈರಪ್ಪ ಮುದ್ದೋಜಿ 40, ಮತ್ತು ನೀಚಣಿಕಿ ಗ್ರಾಮದ
ಬಸವರಾಜ ಶಿವಪುತ್ರಪ್ಪ ನರಗುಂದ, 35, ಶ್ರೀಕುಮಾರ ನರಗುಂದ, 5, ಮತ್ತು ಹೆಬ್ಬಳ್ಳಿಯ ಈರಣ್ಣ ಗುರುಸಿದ್ದಪ್ಪ ರಾಮಮನಗೌಡರ 35 ಎಂದು ಗುರುತ್ತಿಸಲಾಗಿದೆ.

ಈರಣ್ಣ ರಾಮನಗೌಡರ ರಸ್ತೆ ಬದಿಯಿಂದ ಹೊರಟಿದ್ದರು. ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಕಾರ್ ಈರಣ್ಣ ಅವರಿಗೂ ಹಾಯ್ದು ಅವರೂ ಸ್ಥಳದಲ್ಲೇ ಸಾವಿಗೀಡಾದರು.

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಗಾಯಗೊಂಡಿರುವ ಶಿವಕುಮಾರ ಬಸವರಾಜ ನರಗುಂದ, ಮಡಿವಾಳಪ್ಪ ರಾಜು ಅಳ್ನಾವರ ಅವರನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಮತ್ತು ಪ್ರಕಾಶ ಗೌಡ ಶಂಕರಗೌಡ ಪಾಟೀಲ ಮತ್ತು ಮಂಜುನಾಥ ಮಹಾಂತೇಶ ಮುಧೋಳ ಅವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೂ ಸೇರಿಸಲಾಗಿದೆ.

ಗರಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.