ಚಂಡಿಗಡ, ೨೦-: ಹರ್ಯಾಣದಲ್ಲಿ ಮತಾಂತರದ ವಿವಾಹಕ್ಕೆ ನಿಷೇಧಿಸಲಾಗಿದೆ. ಈ ಕಾಯ್ದೆಯನ್ನು ಉಲ್ಲಂಘಿಸಿದರೆ, ಅಂತಹ ವ್ಯಕ್ತಿಗೆ 3ರಿಂದ 10ವರ್ಷಗಳವರೆಗೆ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.
ಹರ್ಯಾಣದಲ್ಲಿ ಕಳೆದ 4 ವರ್ಷಗಳಲ್ಲಿ 127 ಮತಾಂತರ ಪ್ರಕರಣ ದಾಖಲಾಗಿವೆ. ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ ಸರ್ಕಾರ “ಧಾರ್ಮಿಕ ಮತಾಂತರ ನಿಗ್ರಹ ಕಾಯ್ದೆ-2022” ಜಾರಿಗೆ ಶಿಫಾರಸು ಮಾಡಿದ್ದು, ಇದೀಗ ಆ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ರಾಜ್ಯದಲ್ಲಿ ಜಾರಿಗೊಂಡಿರುವ ಧಾರ್ಮಿಕ ಮತಾಂತರ ನಿಗ್ರಹ ಕಾಯ್ದೆ2022 ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ನಿಟ್ಟಿನಲ್ಲಿ ಬಲವಂತದ ಮತಾಂತರ ಪ್ರಕರಣದ ಬಗ್ಗೆ ಸಂತ್ರಸ್ತರು ಮತ್ತು ಆರೋಪಿ ವಿರುದ್ಧ ಕೋರ್ಟ ಕ್ರಮ ತೆಗೆದುಕೊಳ್ಳಲು ಕಾಯ್ದೆ ನೆರವಾಗಲಿದೆ ಎಂದು ವರದಿ ತಿಳಿಸಿದೆ.
ಒಂದು ವೇಳೆ ಬಲವಂತದ ಮತಾಂತರದ ವಿವಾಹದ ನಂತರ ಮಗು ಜನಿಸಿದ ಮೇಲೆ ಮಹಿಳೆ ಅಥವಾ ಪುರುಷ ವಿವಾಹದ ಬಗ್ಗೆ ಅಸಮಾಧಾನ ಇದ್ದರೆ ಇಬ್ಬರೂ ಕೋರ್ಟ ಮೊರೆ ಹೋಗಬಹುದು. ಆಗ ಕೋರ್ಟ್ ಮಗುವಿನ ಮುಂದಿನ ಭವಿಷ್ಯದ ದೃಷ್ಟಿಯಲ್ಲಿ ಜೀವನಾಂಶ ನೀಡುವಂತೆ ಆದೇಶ ನೀಡಲಿದೆ. ಇದರಲ್ಲಿ ಕಾಯ್ದೆಯ 6ರ ಅಡಿಯಲ್ಲಿ ವಿವಾಹ ಅಸಿಂಧು ಎಂದು ಘೋಷಿಸುವ ನಿಬಂಧನೆಯೂ ಇದೆ ಎಂದು ವರದಿ ವಿವರಿಸಿದೆ.
ಮತಾಂತರ ವಿಚಾರದಲ್ಲಿ ವಿಭಾಗೀಯ ಕಮಿಷನರ್ ಗೆ ಮನವಿ ಸಲ್ಲಿಸುವ ಅವಕಾಶವಿದ್ದು ಒಂದು ವೇಳೆ ಸ್ವಇಚ್ಛೆಯಿಂದ ಮತಾಂತರಗೊಂಡಿದ್ದರೆ, ಆಗ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು. ಆ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಯ ನೋಟಿಸ್ ಬೋರ್ಡ್ ನಲ್ಲಿ ಹಾಕಲಾಗುತ್ತದೆ. ಒಂದು ವೇಳೆ ಆಕ್ಷೇಪ ಬಂದರೆ ಇಲ್ಲವೇ 30ದಿನದೊಳಗೆ ಲಿಖಿತ ದೂರು ಬಂದರೆ, ಜಿಲ್ಲಾಧಿಕಾರಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮತಾಂತರ ಘಟನೆಯಲ್ಲಿ ಕಾಯ್ದೆ ಉಲ್ಲಂಘನೆಯಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಿರ್ಧರಿಸುತ್ತಾರೆ. ನಂತರ 30ದಿನದೊಳಗೆ ಜಿಲ್ಲಾಧಿಕಾರಿ ಆದೇಶದ ವಿರುದ್ಧ ವಿಭಾಗೀಯ ಕಮಿಷನರ ಗೆ ಮನವಿ ಸಲ್ಲಿಸಬಹುದಾಗಿದೆ ಎಂದು ವರದಿ ತಿಳಿಸಿದೆ.
ಬಲವಂತದ ಮತಾಂತರಕ್ಕೆ 1ರಿಂದ 5 ವರ್ಷ ಜೈಲುಶಿಕ್ಷೆ ಮತ್ತು ಕನಿಷ್ಠ ಒಂದು ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶ, ವಿವಾಹದ ವಿಚಾರದಲ್ಲಿ ಧರ್ಮದ ವಿಚಾರ ಮುಚ್ಚಿಟ್ಟರೆ 3ರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ಕನಿಷ್ಠ ಮೂರು ಲಕ್ಷ ರೂಪಾಯಿವರೆಗೆ ದಂಡವನ್ನೂ ವಿಧಿಸಬಹುದಾಗಿದೆ. ಸಾಮೂಹಿಕ ಧಾರ್ಮಿಕ ಮತಾಂತರ ಪ್ರಕರಣದಲ್ಲಿ 10 ವರ್ಷಗಳವರೆಗೆ ಜೈಲುಶಿಕ್ಷೆ