ಬೆಳಗಾವಿ ಬಳಿ ಮಹಿಳೆಯ ಬೆತ್ತಲೆ ಮೆರವಣಿಗೆ; ಕಂಬಕ್ಕೆ ಕಟ್ಟಿ ಥಳಿತ

A B Dharwadkar
ಬೆಳಗಾವಿ ಬಳಿ ಮಹಿಳೆಯ ಬೆತ್ತಲೆ ಮೆರವಣಿಗೆ; ಕಂಬಕ್ಕೆ ಕಟ್ಟಿ ಥಳಿತ

ಬೆಳಗಾವಿ, 11: ಬೆಳಗಾವಿ ಸಮೀಪದ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆ ಮಾಡಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಕಂಬವೊಂದಕ್ಕೆ ಕಟ್ಟಿಹಾಕಿ ಥಳಿಸಿದ ಮನಕಲಕುವ ಅಮಾನವೀಯ ಘಟನೆ ರವಿವಾರ ರಾತ್ರಿ ನಡೆದಿದೆ.

ಪರಸ್ಪರ ಪ್ರೀತಿಸುತ್ತಿದ್ದ ಮಹಿಳೆಯ ಮಗ ದುಂಡಪ್ಪ ಅದೇ ಗ್ರಾಮದ ಪ್ರಿಯಾಂಕಾ ಎಂಬವಳೊಂದಿಗೆ ಓಡಿ ಹೋಗಿದ್ದರಿಂದ ಹುಡುಗಿಯ ಕುಟುಂಬದವರು ಹುಡುಗನ ತಾಯಿ 42 ವರ್ಷದ ಮಹಿಳೆಯೊಂದಿಗೆ ಈ ರೀತಿ ಅಮಾನವೀಯವಾಗಿ ವರ್ತಿಸಿದ್ದಾರೆ.

ಇಂದು ಪ್ರಿಯಾಂಕಾಳ ಮದುವೆಯ ನಿಶ್ಚಿತಾರ್ಥವಿತ್ತು.
ದುಂಡಪ್ಪ-ಪ್ರಿಯಾಂಕಾ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದು ನಿನ್ನೆ ರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದಾರೆ.

ಇದರಿಂದ ರೊಚ್ಚಿಗೆದ್ದ ಯುವತಿಯ ಕುಟುಂಬಸ್ಥರು ಯುವಕನ ಮನೆ ಮೇಲೆ ದಾಳಿ ಮಾಡಿ ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಿ ಕೆಡವಿದ್ದಾರೆ. ತಡರಾತ್ರಿ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿದರು.

ಪ್ರಕರಣ ಸಂಬಂಧ ಏಳು ಜನರನ್ನು ಬಂಧಿಸಲಾಗಿದ್ದು
ಗ್ರಾಮದಲ್ಲಿ ಎರಡು ಕೆ ಎಸ್ ಆರ್ ಪಿ ಪೊಲೀಸ್ ತುಕಡಿಗಳನ್ನು ಬಂದೋಬಸ್ತಗೆ ನಿಯೋಜಿಸಲಾಗಿದೆ.

ಉತ್ತರ ಪ್ರದೇಶ, ಬಿಹಾರಗಳಂಥ ರಾಜ್ಯಗಳಲ್ಲಿ ಇಂಥ ಹೇಯ ಘಟನೆಗಳ ಬಗ್ಗೆ ಕೇಳುತ್ತಿದ್ದೇವಾದರೂ ರಾಜ್ಯದಲ್ಲಿಯೂ ಇಂಥ ಘಟನೆ ನಡೆದಿದೆ. ಇಂದಿನ ದಿನಗಳಲ್ಲಿ ಅಪರಾಧಿಗಳಿಗೆ ಪೊಲೀಸ ಮತ್ತು ನ್ಯಾಯಾಂಗದ ಹೆದರಿಕೆಯೇ ಇಲ್ಲದಂತಾಗಿದ್ದು ದುರ್ದೈವ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.