ಎನ್ ಡಿಟಿವಿ ಅದಾನಿ ತೆಕ್ಕೆಗೆ; ನಿರೀಕ್ಷೆಯಂತೆ ಧೀಮಂತ ಪತ್ರಕರ್ತ ರವೀಶ ಕುಮಾರ ರಾಜೀನಾಮೆ

A B Dharwadkar
ಎನ್ ಡಿಟಿವಿ ಅದಾನಿ ತೆಕ್ಕೆಗೆ; ನಿರೀಕ್ಷೆಯಂತೆ ಧೀಮಂತ ಪತ್ರಕರ್ತ ರವೀಶ ಕುಮಾರ ರಾಜೀನಾಮೆ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಹೊಸದಿಲ್ಲಿ: ಸರಕಾರಗಳು ಮಾಡುವ ತಪ್ಪುಗಳನ್ನು ಹೊರತಂದು ಜನರ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದ ದೇಶ ಬೆರಳೆಣಿಕೆಯ ಪತ್ರಕರ್ತರಲ್ಲಿ ಮುಂಚೂಣಿಯಲ್ಲಿರುವ ಹಿರಿಯ ಪತ್ರಕರ್ತ ರವೀಶ ಕುಮಾರ ಅವರು ಎನ್‌ಡಿಟಿವಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಎನ್ ಡಿಟಿವಿಯನ್ನು ವ್ಯವಸ್ಥಿತವಾಗಿ ಅದಾನಿ ಸಮೂಹ ಖರೀದಿಸಿದಾಗಲೇ ದೇಶದ ಧೀಮಂತ ಪತ್ರಕರ್ತ ರವೀಶಕುಮಾರ ನಿರ್ಗಮನ ನಿರೀಕ್ಷಿಸಲಾಗಿತ್ತು.

ಸುದ್ದಿ ವಾಹಿನಿಯು ನಿನ್ನೆ ಬುಧವಾರ ಆಂತರಿಕ ಸಂವಹನದ ಮೂಲಕ ರವೀಶ ಕುಮಾರ ಅವರ ರಾಜೀನಾಮೆ ಘೋಷಿಸಿದೆ.

ಪ್ರತಿಷ್ಠಿತ ರಾಮೊನ್ ಮ್ಯಾಗಸ್ಸೆಸೆ ಪ್ರಶಸ್ತಿ ವಿಜೇತ ಸುದ್ದಿ ನಿರೂಪಕರರಾಗಿರುವ ರವೀಶ ಕುಮಾರ ಜನಪ್ರಿಯ ಕಾರ್ಯಕ್ರಮಗಳಾದ ‘ಪ್ರೈಮ್ ಟೈಮ್’, ‘ರವೀಶ್ ಕಿ ರಿಪೋರ್ಟ’, ‘ಹಮ್ ಲೋಗ್’ ಮತ್ತು ‘ದೇಶ್ ಕಿ ಬಾತ್’ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಅವರ ರಾಜೀನಾಮೆ ತಕ್ಷಣವೇ ಜಾರಿಗೆ ಬಂದಿದೆ ಎಂದು ಎನ್‌ಡಿಟಿವಿ ತಿಳಿಸಿದೆ. “ಕೆಲವೇ ಪತ್ರಕರ್ತರು ರವೀಶ ಅವರಂತೆ ಜನರ ಮೇಲೆ ಪ್ರಭಾವ ಬೀರಿದ್ದಾರೆ” ಎಂದು ಆಂತರಿಕ ಸಂವಹನವನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಎನ್‌ಡಿಟಿವಿಯ ಪ್ರವರ್ತಕ ಸಮೂಹ ಸಂಸ್ಥೆಯಾದ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಸ್ಥಾಪಕರಾದ ಪ್ರಣಯ ರಾಯ್ ಮತ್ತು ರಾಧಿಕಾ ರಾಯ್ ಅವರ ರಾಜೀನಾಮೆಯನ್ನು ಹೊಸ ಎನ್‌ಡಿಟಿವಿ ಮಂಡಳಿ ಮೊನ್ನೆ ಅನುಮೋದಿಸಿದ ಒಂದು ದಿನದ ನಂತರ ರವೀಶ ಕುಮಾರ ರಾಜೀನಾಮೆ ನೀಡಿದ್ದಾರೆ.

ಮಂಡಳಿಯು ತಕ್ಷಣವೇ ಜಾರಿಗೆ ಬರುವಂತೆ ಸಂಜಯ್ ಪುಗಾಲಿಯಾ ಮತ್ತು ಸೆಂಥಿಲ್ ಚೆಂಗಲ್ವರಾಯನ್ ಅವರನ್ನು ಮಂಡಳಿಯಲ್ಲಿ ನಿರ್ದೇಶಕರನ್ನಾಗಿ ನೇಮಿಸಿದೆ. ಎನ್‌ಡಿಟಿವಿಯ ಪ್ರವರ್ತಕ ಸಂಸ್ಥೆ ಆರ್‌ಆರ್‌ಪಿಆರ್ ಹೋಲ್ಡಿಂಗ್ ಸೋಮವಾರ ತನ್ನ ಈಕ್ವಿಟಿ ಬಂಡವಾಳದ ಶೇಕಡಾ 99.5 ಷೇರುಗಳನ್ನು ಅದಾನಿ ಸಮೂಹದ ಒಡೆತನದ ವಿಶ್ವಪ್ರಧನ್ ಕಮರ್ಷಿಯಲ್ ಗೆ ವರ್ಗಾಯಿಸಿದೆ ಎಂದು ಹೇಳಿದ್ದು, ಎನ್‌ಡಿಟಿವಿಯ ಅಧಿಕೃತ ಸ್ವಾಧೀನವನ್ನು ಅದಾನಿ ಸಮೂಹವು ಪೂರ್ಣಗೊಳಿಸಿದೆ.

ಷೇರುಗಳ ವರ್ಗಾವಣೆಯು ಎನ್ ಡಿಟಿವಿ ಯಲ್ಲಿನ ಶೇಕಡಾ 29.18 ರಷ್ಟು ಪಾಲನ್ನು ಅದಾನಿ ಸಮೂಹಕ್ಕೆ ನೀಡುತ್ತದೆ. ವೈವಿಧ್ಯಮಯ ಸಂಘಟಿತ ಸಂಸ್ಥೆಯು ಮಾಧ್ಯಮ ಸಂಸ್ಥೆಯಲ್ಲಿ ಮತ್ತೊಂದು ಶೇಕಡಾ 26 ರಷ್ಟು ಷೇರುಗಳಿಗೆ ಮುಕ್ತ ಕೊಡುಗೆಯನ್ನು ಸಹ ನಡೆಸುತ್ತಿದೆ.

ಸರ್ಕಾರ ಮಾಡುವ ತಪ್ಪುಗಳನ್ನು ಧೈರ್ಯದಿಂದ ಜನರ ಮುಂದೆ ತರುತ್ತಿದ್ದ ಪತ್ರಕರ್ತರನ್ನು ಹಂತಹಂತವಾಗಿ ಮನೆಗೆ ಕಳಿಸಲಾಗಿದ್ದು ಉಳಿದ ಏಕೈಕ ಸ್ವತಂತ್ರ ಚಾನಲ್ ಸಹ ರವೀಶಕುಮಾರ ಹೇಳುವ ಹಾಗೆ “ಗೋದಿ ಮಿಡಿಯಾ” ಆಗಿ ಪರಿವರ್ತನೆ ಆಗಲಿದೆ.

ನಿಜವಾದ ಪತ್ರಿಕಾಧರ್ಮ ನಿರ್ವಹಿಸುತ್ತಿದ್ದ ದೇಶದ ಏಕೈಕ ಸ್ವತಂತ್ರ ಸುದ್ದಿ ಚಾನಲ್ ಎನ್ ಡಿಟಿವಿ ಸಹ ಹಿಂಬಾಗಿಲ ಮೂಲಕ ಸರ್ಕಾರದ ಕೈಗೊಂಬೆಯಾಗುತ್ತಿರುವುದು ದೇಶದ ನಾಗರಿಕರ ದುರ್ದೈವ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.