ಕೊಲ್ಹಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆಯನ್ನು ಖಂಡಿಸಿ, ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರು ಉದ್ಧಟತನ ಮುಂದುವರೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಣಕು ಶವಯಾತ್ರೆ ನಡೆಸಿ, ಕರ್ನಾಟಕದ ಮತ್ತೊಂದು ಬಸ್ಗೆ ಮಸಿ ಬಳಿದು ಪುಂಡಾಟ ಮೆರೆದಿದ್ದಾರೆ.
ಶಿವಸೇನೆ ಉದ್ಧವ ಠಾಕ್ರೆ ಬಣದ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ ದೇವಣೆ ನೇತೃತ್ವದಲ್ಲಿ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ವಿಜಯಪುರ – ಕೊಲ್ಲಾಪುರ ಮಾರ್ಗದ ಕೆಎಸ್ಆರ್ಟಿಸಿ ಬಸ್ಗೆ ಮಸಿ ಬಳಿದಿದ್ದಾರೆ.
ಈ ವೇಳೆ, ಕರ್ನಾಟಕದ ಬಸ್ಗೆ ಜೈ ಮಹಾರಾಷ್ಟ್ರ ಅಂತಾ ಬರೆದಿದ್ದು, ಕರ್ನಾಟಕ ಬಸ್ಗಳನ್ನು ಕೂಡಲೇ ಬಂದ್ ಮಾಡುವಂತೆ ಘೋಷಣೆ ಹಾಕಿದ್ದಾರೆ.