LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಮೊಜ್ತಬಾ ಖಮೇನಿ ಪ್ರತಿಜ್ಞೆ

ತಂದೆಯ ಸಾವಿಗೆ ಪ್ರತೀಕಾರ ತೀರಿಸಿಯೇ ತೀರುತ್ತೇವೆ: ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಶಪಥ

ತೆಹರಾನ್: ಎರಡು ಯುದ್ಧಗಳಲ್ಲಿ ಮೃತಪಟ್ಟ ಎಲ್ಲ ಹುತಾತ್ಮರ ರಕ್ತಕ್ಕೂ ಹಾಗೂ ತಮ್ಮ ತಂದೆ ಆಯತೊಲ್ಲಾ ಅಲಿ ಖಮೇನಿ ಅವರ ಸಾವಿಗೂ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಘೋಷಿಸಿದ್ದಾರೆ.

ದೇಶದ ಜನರನ್ನುದ್ದೇಶಿಸಿ ಬಿಡುಗಡೆ ಮಾಡಿದ ಲಿಖಿತ ಸಂದೇಶದಲ್ಲಿ ಮಾತನಾಡಿರುವ ಮೊಜ್ತಬಾ ಖಮೇನಿ, "ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಇಡೀ ರಾಷ್ಟ್ರದ ಸಂಕಲ್ಪವಾಗಿದೆ. ಆ ಪ್ರತೀಕಾರ ಖಂಡಿತವಾಗಿಯೂ ತೀರಿಸಲಾಗುತ್ತದೆ" ಎಂದು ಹೇಳಿದ್ದಾರೆ.

ಆಯತೊಲ್ಲಾ ಅಲಿ ಖಮೇನಿ ಅವರ ಅಂತಿಮಯಾತ್ರೆ ಅವರ ತವರು ಹಾಗೂ ಶಿಯಾ ಮುಸ್ಲಿಮರ ಪ್ರಮುಖ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಈಶಾನ್ಯ ಇರಾನ್‌ನ ಮಶಾದ್ ನಗರದಲ್ಲಿ ಭಾರಿ ಜನಸ್ತೋಮದ ನಡುವೆ ನೆರವೇರಿತ್ತು. ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳು ಜುಲೈ 4ರಿಂದ 9ರವರೆಗೆ ನಡೆದಿದ್ದವು.

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ನಡೆಸಿದ ಯುದ್ಧದ ಮೊದಲ ದಿನವಾದ ಫೆಬ್ರುವರಿ 28ರಂದು ನಡೆದ ದಾಳಿಯಲ್ಲಿ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದರು. ಮೃತಪಟ್ಟ ವೇಳೆ ಅವರಿಗೆ 86 ವರ್ಷ ವಯಸ್ಸಾಗಿತ್ತು.

ಈ ದಾಳಿಯಲ್ಲಿ ಮೊಜ್ತಬಾ ಖಮೇನಿ ಅವರ ಪತ್ನಿ, ಮೊಮ್ಮಗಳು, ಅಳಿಯ ಹಾಗೂ ಮಗಳೂ ಸಾವಿಗೀಡಾಗಿದ್ದರು. ಅವರನ್ನೂ ಆಯತೊಲ್ಲಾ ಅಲಿ ಖಮೇನಿ ಅವರ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಶಿಯಾ ಮುಸ್ಲಿಮರ ಎಂಟನೇ ಇಮಾಮ್ ಎಂದು ಪೂಜಿಸಲ್ಪಡುವ ಇಮಾಮ್ ರೆಜಾ ಅವರ ದರ್ಗಾ ಆವರಣದಲ್ಲೇ ಆಯತೊಲ್ಲಾ ಅಲಿ ಖಮೇನಿ ಅವರನ್ನು ಸಮಾಧಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್‌ ಜಾನಕಿ ನಿಧನಕ್ಕೆ ಗಣ್ಯರ ಕಂಬನಿಮೌನವಾದ ಗಾನಕೋಗಿಲೆ ಎಸ್.‌ ಜಾನಕಿ; ಅನಾಥಗೊಂಡ ಸಂಗೀತ ಲೋಕಜುಲೈ 17ರಂದು ಪ್ರಧಾನಿ ಮೋದಿಯಿಂದ ಅಳ್ನಾವರ ರೈಲು ನಿಲ್ದಾಣ ಲೋಕಾರ್ಪಣೆಭಾರತ ಜಗತ್ತಿಗೆ ಅಭಿವೃದ್ಧಿಯ ಹೊಸ ಸೂತ್ರ ತೋರಿಸುತ್ತಿದೆ : ಪ್ರಧಾನಿ ಮೋದಿಜವಾಬ್ದಾರಿ ಅರಿತು ನಿಮ್ಮ ಬದುಕಿಗೆ ನೀವೇ ಹೀರೊ ಆಗಿ : ಸೊನಮ್ ವಾಂಗ್ಚೂಕ ಕರೆತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಮೊಜ್ತಬಾ ಖಮೇನಿ ಪ್ರತಿಜ್ಞೆಸ್ನಾನ ಮಾಡುತ್ತಿದ್ದ ವೇಳೆ ಕೊಡಲಿಯಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆಹನಿಮೂನ್‌ ಸೂಟ್‌ ಆಗಿ ಮಾರ್ಪಟ್ಟ ರೈಲಿನ ಎಸಿ ಕ್ಯಾಬಿನ್‌; ವೈರಲ್‌ ವೀಡಿಯೊ ಬೆನ್ನಲ್ಲೇ ಟಿಟಿಇ ಅಮಾನತುಪೋಕ್ಸೋ ಪ್ರಕರಣದ ಆರೋಪಿ ಅಟ್ಟಹಾಸ; 17 ವರ್ಷದ ಬಾಲಕಿ ಸೇರಿ 6 ಮಂದಿಯ ಬರ್ಬರ ಹತ್ಯೆವಿಯೆಟ್ನಾಂನಲ್ಲಿ ಪ್ರವಾಸಿ ದೋಣಿ ದುರಂತ; 15 ಭಾರತೀಯರ ದುರ್ಮರಣ, 21 ಮಂದಿಯ ರಕ್ಷಣೆ