LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಪಿಎಂ-ಕಿಸಾನ್ ಕಂತು: 1 ಪೈಸೆ ಜಮೆ!

ಮುಂಬೈ, ಜೂ. 30: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 23ನೇ ಕಂತಿನ ಹಣ ಬಿಡುಗಡೆಗೊಂಡ ಬೆನ್ನಲ್ಲೇ ಮಹಾರಾಷ್ಟ್ರದ ರೈತರೊಬ್ಬರಿಗೆ ₹2,000 ಬದಲು ಕೇವಲ 1 ಪೈಸೆ ಜಮೆಯಾಗಿದೆ ಎಂಬ ಸಂದೇಶ ಮೊಬೈಲ್‌ಗೆ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು. ಬಳಿಕ ಇದು ಕೇವಲ ತಾಂತ್ರಿಕ ದೋಷದಿಂದ ಉಂಟಾದ ಸಂದೇಶವಾಗಿದ್ದು, ರೈತನ ಖಾತೆಗೆ ಸಂಪೂರ್ಣ ₹2,000 ಯಶಸ್ವಿಯಾಗಿ ಜಮೆಯಾಗಿದೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.

ಭಂಡಾರ ಜಿಲ್ಲೆಯ ಜೆವಾನಾಲ ಗ್ರಾಮದ 65 ವರ್ಷದ ರೈತ ಖೇಮರಾಜ್ ಗಿರೆಪುಂಜೆ ಅವರ ತಾಯಿ ಲಕ್ಷ್ಮಿಬಾಯಿ ಅವರ ಮೊಬೈಲ್‌ಗೆ, ಪಿಎಂ-ಕಿಸಾನ್ ಯೋಜನೆಯಡಿ ಬ್ಯಾಂಕ್ ಖಾತೆಗೆ ಕೇವಲ ₹0.01 ಜಮೆಯಾಗಿದೆ ಎಂಬ ಸಂದೇಶ ಬಂದಿತ್ತು. ಈ ಸಂದೇಶ ಕಂಡ ಕುಟುಂಬ ಸದಸ್ಯರು ದಿಗ್ಭ್ರಮೆಗೊಂಡಿದ್ದು, ಸರ್ಕಾರದಿಂದ ರೈತರಿಗೆ ನೀಡುವ ನೆರವು ಕುರಿತು ಆತಂಕ ವ್ಯಕ್ತಪಡಿಸಿದ್ದರು.

ಖಾರಿಫ್ ಬಿತ್ತನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೀಜ, ರಸಗೊಬ್ಬರ ಹಾಗೂ ಇತರ ಕೃಷಿ ಚಟುವಟಿಕೆಗಳಿಗೆ ಹಣದ ಅಗತ್ಯ ಹೆಚ್ಚಿರುವ ಸಮಯದಲ್ಲಿ ಇಂತಹ ಸಂದೇಶ ಬಂದಿರುವುದು ರೈತ ಕುಟುಂಬದ ಚಿಂತೆಗೆ ಕಾರಣವಾಯಿತು ಎಂದು ಖೇಮರಾಜ್ ಗಿರೆಪುಂಜೆ ತಿಳಿಸಿದ್ದಾರೆ.

ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಭಂಡಾರ ಜಿಲ್ಲಾ ಕೃಷಿ ಅಧಿಕಾರಿ ಸಂಗೀತಾ ಮಾನೆ, ತಾಂತ್ರಿಕ ದೋಷದಿಂದ ಫಲಾನುಭವಿಗೆ ತಪ್ಪಾದ ಸಂದೇಶ ತಲುಪಿದೆ. ಇಲಾಖೆಯ ದಾಖಲೆಗಳ ಪ್ರಕಾರ ರೈತನ ಬ್ಯಾಂಕ್ ಖಾತೆಗೆ ವಾಡಿಕೆಯಂತೆ ₹2,000 ಯಶಸ್ವಿಯಾಗಿ ಜಮೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗಮನಾರ್ಹವಾಗಿ, ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್ ಯೋಜನೆಯ 23ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು, ದೇಶದಾದ್ಯಂತ 9.44 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡಲಾಗಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರೀಕ್ಷೆ ಮುಗಿದ ಕೇವಲ 5 ನಿಮಿಷದಲ್ಲಿ ಫಲಿತಾಂಶ: ಹೊಸ ದಾಖಲೆ ಬರೆದ ವಿಟಿಯುಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಆಗ್ರಹಿಸಿ ಉಪವಾಸ: ಹದಗೆಟ್ಟ ಸೋನಮ್ ವಾಂಗ್‌ಚುಕ್ ಆರೋಗ್ಯ ಭಾರತದ 31ನೇ ಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ ಸೇಠ ಅಧಿಕಾರ ಸ್ವೀಕಾರಪಿಎಂ-ಕಿಸಾನ್ ಕಂತು: 1 ಪೈಸೆ ಜಮೆ!ಸೈನಿಕರ ಸಾವಿನ ಬಗ್ಗೆ ಸಂಸತ್ ಗೆ ತಪ್ಪು ಮಾಹಿತಿ : ರಕ್ಷಣಾ ಸಚಿವ ರಾಜನಾಥ ಸಿಂಗ್ ವಿರುದ್ಧ ಹಕ್ಕುಚ್ಯುತಿ ನೋಟಿಸ್126 ವರ್ಷಗಳಲ್ಲೇ ಮೂರನೇ ಅತಿ ಕಳಪೆ ಮುಂಗಾರು!3 ವರ್ಷದ ಕಂದಮ್ಮನ ಮೇಲೆ ಲೈಂಗಿಕ ಕೃತ್ಯ, ಕೊಲೆ: 65 ವರ್ಷದ ಅಪರಾಧಿಗೆ ಗಲ್ಲುಶಿಕ್ಷೆರಾಜ್ಯದಲ್ಲೆಡೆ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆಗೆ ಹೊಸ ವ್ಯವಸ್ಥೆವಿವಾಹಿತೆಯೊಂದಿಗೆ ಪರಾರಿ: ಮನೆ ಧ್ವಂಸ ಪ್ರಕರಣದಲ್ಲಿ 3 ಪ್ರಮುಖ ಆರೋಪಿಗಳ ಬಂಧನವಿವಾಹಿತೆಯೊಂದಿಗೆ ಪರಾರಿಯಾದ ಯುವಕನ ಮನೆ ಮೇಲೆ ದಾಳಿ; ಮನೆ ಧ್ವಂಸ, ಚಿನ್ನಾಭರಣ, 25 ಕುರಿ ದೋಚಿದ ಆರೋಪ