ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಇನ್ಸೂರೆನ್ಸ ಹಣಕ್ಕಾಗಿ ಅಣ್ಣನ ಕೊಲೆ

ಗೋಕಾಕ : ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ ಭೀಕರ ಕೊಲೆ ಬೆಳಕಿಗೆ ಬಂದಿದ್ದು
ಹನುಮಂತ ಗೋಪಾಲ ತಳವಾರ (35) ಭೀಕರ ಕೊಲೆಯಾದವ. ಬಸವರಾಜ ತಳವಾರ ಎಂಬಾತ ಇತರ ಸ್ನೇಹಿತರೊಂದಿಗೆ ಸ್ವಂತ ಅಣ್ಣನನ್ನು ಕೊಲೆ ಮಾಡಿದ್ದಾನೆ.

ಹನುಮಂತನ ಹೆಸರಿನಲ್ಲಿ 50 ಲಕ್ಷ ರೂಪಾಯಿ ಇನ್ಸೂರೆನ್ಸ ಮಾಡಲಾಗಿತ್ತು. ಈ ಹನುಮಂತನ ಹೆಸರಿನಲ್ಲಿದ್ದ ಇನ್ಸೂರೆನ್ಸಗೆ ಬಸವರಾಜ ನಾಮಿನಿ ಆಗಿದ್ದ. ಅಣ್ಣ ಸತ್ತರೆ ಅದರ ಲಾಭ ನನಗೆ ಸಿಗಬಹುದು ಎಂದು ಭಾವಿಸಿ ತನ್ನ ಸ್ನೇಹಿತರ ಜೊತೆ ಸೇರಿ ಕಂಠಪೂರ್ತಿ ಕುಡಿದು ಅಣ್ಣನನ್ನು ಹತ್ಯೆ ಮಾಡಿದ್ದಾನೆ.

ಶ್ರೀಗಂಧದ ಕಟ್ಟಿಗೆಗಳು ಇವೆ, ಅದನ್ನು ತರಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದಾನೆ. ಆಗ ಹನುಮಂತನ ತಲೆಗೆ ರಾಡಿನಿಂದ ಹೊಡೆದು ಕೊಲೆ ಮಾಡಿರುವುದು ಪೋಲಿಸ್ ತನಿಖೆ ವೇಳೆ ಬಯಲಾಗಿದೆ.

ಬಸವರಾಜ ತಳವಾರ, ಬಾಪು ಶೇಖ, ಈರಪ್ಪ ಹಡಗಿನಾಳ, ಸಚಿವ ಕಂಠೇನವರ ಆರೋಪಿಗಳು. ಮೂಡಲಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.