LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಭರ್ತಿಗೆ ನಾಲ್ಕು ಅಡಿ ಬಾಕಿ: ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ

Advertisement

ಬೆಳಗಾವಿ, ಜುಲೈ 27: ಬೆಳಗಾವಿ ನಗರದ ಪ್ರಮುಖ ಕುಡಿಯುವ ನೀರಿನ ನೀರಿನ ಮೂಲವಾಗಿರುವ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಲು ಇದೀಗ ಕೇವಲ ನಾಲ್ಕು ಅಡಿ ಮಾತ್ರ ಬಾಕಿಯಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಜಲಾಶಯದಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಹೆಚ್ಚಿದ್ದು, ನಗರ ನಿವಾಸರಲ್ಲಿ ನೆಮ್ಮದಿ ಮೂಡಿಸಿದೆ.

ಭಾನುವಾರದ ವೇಳೆಗೆ ಜಲಾಶಯದ ನೀರಿನ ಮಟ್ಟ 2,470.3 ಅಡಿ ತಲುಪಿದ್ದು, ಪೂರ್ಣ ಜಲಾಶಯ ಮಟ್ಟ 2,477 ಅಡಿ ಆಗಿದೆ. ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 0.5 ಟಿಎಂಸಿ ಆಗಿದೆ.

ಮಾರ್ಕಂಡೇಯ ನದಿ ಹಾಗೂ ಜಾಂಬುಳ ಕಾಲುವೆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ಸಂಗ್ರಹ ವೇಗವಾಗಿ ಏರಿಕೆಯಾಗುತ್ತಿದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಇನ್ನೂ ಕೆಲವೇ ದಿನಗಳಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆ ಇದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

1963ರಲ್ಲಿ ನಿರ್ಮಾಣಗೊಂಡ ರಕ್ಕಸಕೊಪ್ಪ ಜಲಾಶಯದ ಮೂಲ ಸಂಗ್ರಹ ಮಟ್ಟ 2,470 ಅಡಿ ಆಗಿತ್ತು. ಬಳಿಕ ಬೆಳಗಾವಿ ನಗರದ ಜನಸಂಖ್ಯೆ ಹೆಚ್ಚಳ ಹಾಗೂ ಕುಡಿಯುವ ನೀರಿನ ಬೇಡಿಕೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, 1985ರಲ್ಲಿ ಆರು ವೇಸ್ಟ್‌ವೇಗಳನ್ನು ನಿರ್ಮಿಸಿ ಮಾರ್ಕಂಡೇಯ ನದಿಗೆ ಗೇಟ್‌ಗಳನ್ನು ಅಳವಡಿಸುವ ಮೂಲಕ ಪೂರ್ಣ ಜಲಾಶಯ ಮಟ್ಟವನ್ನು 2,477 ಅಡಿಗೆ ಹೆಚ್ಚಿಸಲಾಯಿತು.

ಸುಮಾರು ಏಳು ಲಕ್ಷ ಜನಸಂಖ್ಯೆ ಹೊಂದಿರುವ ಬೆಳಗಾವಿ ನಗರಕ್ಕೆ ಪ್ರತಿದಿನ 130ರಿಂದ 135 ಎಂಎಲ್‌ಡಿ (ಮಿಲಿಯನ್ ಲೀಟರ್ ಪ್ರತಿ ದಿನ) ಕುಡಿಯುವ ನೀರಿನ ಅಗತ್ಯವಿದೆ. ನಗರದ ಕುಡಿಯುವ ನೀರಿನ ಪೂರೈಕೆ ಮುಖ್ಯವಾಗಿ ರಕ್ಕಸಕೊಪ್ಪ ಹಾಗೂ ಹಿಡಕಲ್ ಜಲಾಶಯಗಳ ಮೇಲೆ ಅವಲಂಬಿತವಾಗಿದೆ.

ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ ತಾಪಮಾನ ಏರಿಕೆ ಹಾಗೂ ನೀರಿನ ಆವಿಯಾಗುವಿಕೆ ಹೆಚ್ಚಾಗುವುದರಿಂದ ಜಲಾಶಯದ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತದೆ. ಆದರೆ ಈ ಬಾರಿ ಮುಂಗಾರು ಉತ್ತಮವಾಗಿರುವುದರಿಂದ ಜಲಾಶಯದಲ್ಲಿ ಸಮೃದ್ಧ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದ್ದು, ಮುಂದಿನ ಬೇಸಿಗೆಗೂ ಕುಡಿಯುವ ನೀರಿನ ಕೊರತೆ ಎದುರಾಗದ ವಿಶ್ವಾಸ ವ್ಯಕ್ತವಾಗಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಂಗಾಳಕೊಲ್ಲಿಯ ಮೇಲೆ ಸಾವಿರ ಕಿ.ಮೀ. ವ್ಯಾಪಿಸಿದ ಮಳೆಮೋಡಗಳ ಕವಚ; ಮುಂಗಾರಿನ ಅಬ್ಬರ ಸೆರೆಹಿಡಿದ ಉಪಗ್ರಹಎಫ್‌ಐಆರ್‌ ಹಿಂಪಡೆಯದಿದ್ದರೆ ಮತ್ತೆ ಬೀದಿಗಿಳಿಯುವ ಎಚ್ಚರಿಕೆಇ–20 ವಿರುದ್ಧ ರಾಷ್ಟ್ರವ್ಯಾಪಿ ಹೋರಾಟಕ್ಕೆ ಎಎಪಿ ಸಜ್ಜು; ಆಗಸ್ಟ್‌ 1ರಂದು ರಾಷ್ಟ್ರೀಯ ಸಮಾವೇಶಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರ ಸಿಗುವುದಿಲ್ಲ: ಪ್ರಿಯಾಂಕ್ ಖರ್ಗೆ ತಿರುಗೇಟು‘ಗೋವನ್ನು ರಾಷ್ಟ್ರಮಾತೆ’ ಎಂದು ಘೋಷಿಸಲು ಆಗ್ರಹ: 1.80 ಲಕ್ಷ ಸಹಿಗಳ ಮನವಿ ಸಲ್ಲಿಕೆಅನ್ನಭಾಗ್ಯ ಅಕ್ಕಿ ಕಾಳಸಂತೆಗೆ ಸರ್ಕಾರ ಕಠಿಣ ಕ್ರಮ: ಬೆಳಗಾವಿಯಲ್ಲಿ 32 ಮಂದಿ ಆರೋಪಿಗಳ ಪಟ್ಟಿಭರ್ತಿಗೆ ನಾಲ್ಕು ಅಡಿ ಬಾಕಿ: ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿನಿಯರ ಅಪಾಯಕಾರಿ ಪ್ರಯಾಣಇ–20 ವಿರುದ್ಧ ರಾಷ್ಟ್ರವ್ಯಾಪಿ ಹೋರಾಟಕ್ಕೆ ಎಎಪಿ ಸಜ್ಜು; ಆಗಸ್ಟ್‌ 1ರಂದು ರಾಷ್ಟ್ರೀಯ ಸಮಾವೇಶನಾಳೆಯಿಂದ ಕೃಷ್ಣಾ ಕಾಲುವೆಗಳಿಗೆ ನೀರು; ಅಚ್ಚುಕಟ್ಟು ರೈತರಿಗೆ ಸರ್ಕಾರದ ಸಿಹಿ ಸುದ್ದಿ