ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಇಬ್ಬರು ಮಕ್ಕಳೊಂದಿಗೆ ಜಲಾಶಯಕ್ಕೆ ಬಿದ್ದು ಮಹಿಳೆಯ ಆತ್ಮಹತ್ಯೆ

ಸವದತ್ತಿ : ಕೌಟುಂಬಿಕ ಸಮಸ್ಯೆಗಳಿಗೆ ಬೇಸತ್ತು ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮದುರ್ಗ ತಾಲೂಕಿನ ಚುಂಚನನೂರು ಗ್ರಾಮದ 32 ವರುಷದ ಶಶಿಕಲಾ ಅಲಿಯಾಸ್ ತನುಜಾ ಪರಸಪ್ಪ ಗೋಡಿ ತಮ್ಮ ಮಕ್ಕಳಾದ 4 ವರುಷದ ಸುದೀಪ ಮತ್ತು 3 ವರುಷದ ರಾಧಿಕಾರೊಂದಿಗೆ ಜಲಾಶಯ ನೀರಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಮೂವರ ಶವಗಳೂ ಜಲಾಶಯದ ಹಿನ್ನೀರು ಪ್ರದೇಶವಾದ ಒಟ್ನಾಳ ಗ್ರಾಮದ ಬಳಿ ಪತ್ತೆಯಾಗಿವೆ.

ಸವದತ್ತಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.