LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಆಧಾರ ಯಾವ ಮಾದರಿಯಾದರೂ ಮಾನ್ಯ; ಎಲ್ಲ ಆವೃತ್ತಿಗಳಿಗೂ ಸಮಾನ ಕಾನೂನುಬದ್ಧ ಸ್ಥಾನಮಾನ

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ ಕಾರ್ಡ್‌ನ ಎಲ್ಲ ಮಾದರಿಗಳು ಸಮಾನವಾಗಿ ಮಾನ್ಯವಾಗಿದ್ದು, ಗುರುತಿನ ದಾಖಲೆಯಾಗಿ ಯಾವುದೇ ಆವೃತ್ತಿಯನ್ನು ಬಳಸಬಹುದು ಎಂದು ಸ್ಪಷ್ಟಪಡಿಸಿದೆ. ಸಾಂಪ್ರದಾಯಿಕ ಆಧಾರ್ ಪತ್ರ, ಇ-ಆಧಾರ್, ಆಧಾರ್ ಪಿವಿಸಿ ಕಾರ್ಡ್ ಅಥವಾ ಆಧಾರ್ ಆ್ಯಪ್‌ನಲ್ಲಿರುವ ಡಿಜಿಟಲ್ ಆಧಾರ್ – ಇವೆಲ್ಲವೂ ಒಂದೇ ರೀತಿಯ ಕಾನೂನುಬದ್ಧ ಮಾನ್ಯತೆಯನ್ನು ಹೊಂದಿವೆ ಎಂದು ತಿಳಿಸಿದೆ.

ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು, ವಿಮಾನ ನಿಲ್ದಾಣಗಳು ಹಾಗೂ ಇತರ ಸಂಸ್ಥೆಗಳಲ್ಲಿ ಯಾವ ಮಾದರಿಯ ಆಧಾರ್ ಸ್ವೀಕಾರಾರ್ಹ ಎಂಬ ಗೊಂದಲಕ್ಕೆ ಈ ಮೂಲಕ ತೆರೆ ಬಿದ್ದಿದೆ. ಗುರುತಿನ ದಾಖಲೆಯಾಗಿ ಆಧಾರ್ ಅನ್ನು ಒಪ್ಪಿಕೊಳ್ಳುವ ಎಲ್ಲೆಡೆ ಈ ನಾಲ್ಕು ಮಾದರಿಗಳಲ್ಲಿನ ಯಾವುದನ್ನಾದರೂ ಬಳಸಬಹುದಾಗಿದೆ.

ಯುಐಡಿಎಐ ಪ್ರಕಾರ, ಆಧಾರ್ ಪತ್ರ, ಡಿಜಿಟಲ್ ಸಹಿಯುಳ್ಳ ಇ-ಆಧಾರ್ (ಪಿಡಿಎಫ್), ಆಧಾರ್ ಪಿವಿಸಿ ಕಾರ್ಡ್ ಹಾಗೂ ಆಧಾರ್ ಆ್ಯಪ್‌ನಲ್ಲಿರುವ ಡಿಜಿಟಲ್ ಆಧಾರ್ – ಇವೆಲ್ಲವೂ ಅಧಿಕೃತ ದಾಖಲೆಗಳಾಗಿವೆ. ಯಾವುದೇ ಒಂದು ಮಾದರಿಯನ್ನೇ ಕಡ್ಡಾಯಗೊಳಿಸುವ ಅಧಿಕಾರ ಯಾವುದೇ ಸಂಸ್ಥೆಗೆ ಇಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಆಧಾರ್‌ನ ಅಸಲಿಯತ್ತನ್ನು ಪರಿಶೀಲಿಸಲು ಅದರಲ್ಲಿರುವ ಸುರಕ್ಷಿತ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವಂತೆ ಯುಐಡಿಎಐ ಸೂಚಿಸಿದೆ. ಕ್ಯೂಆರ್ ಕೋಡ್‌ನಲ್ಲಿ ಡಿಜಿಟಲ್ ಸಹಿಯುಳ್ಳ ಮಾಹಿತಿ ಅಡಕವಾಗಿರುವುದರಿಂದ, ನಕಲಿ ಅಥವಾ ತಿದ್ದುಪಡಿ ಮಾಡಲಾದ ಆಧಾರ್ ಪ್ರತಿಗಳನ್ನು ಸುಲಭವಾಗಿ ಪತ್ತೆಹಚ್ಚಲು ಹಾಗೂ ವಂಚನೆ ತಡೆಯಲು ಇದು ನೆರವಾಗುತ್ತದೆ.

ಮುದ್ರಿತ ಮಾಹಿತಿಯನ್ನು ಮಾತ್ರ ಅವಲಂಬಿಸುವ ಬದಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಆಧಾರ್ ವಿವರಗಳನ್ನು ತ್ವರಿತವಾಗಿ, ನಿಖರವಾಗಿ ಮತ್ತು ಸುರಕ್ಷಿತವಾಗಿ ಪರಿಶೀಲಿಸಬಹುದು. ಇದರಿಂದ ಗುರುತು ದೃಢೀಕರಣ ಪ್ರಕ್ರಿಯೆಯ ವಿಶ್ವಾಸಾರ್ಹತೆಯೂ ಹೆಚ್ಚುತ್ತದೆ.

ಆಧಾರ್ ಆ್ಯಪ್ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಡಿಜಿಟಲ್ ಆಧಾರ್ ಅನ್ನು ಸಂಗ್ರಹಿಸಿ ಅಗತ್ಯವಿದ್ದಾಗ ಪ್ರದರ್ಶಿಸುವ ಅವಕಾಶ ನೀಡುತ್ತದೆ. ಭೌತಿಕ ಕಾರ್ಡ್ ಅನ್ನು ಜೊತೆಯಲ್ಲಿ ಕೊಂಡೊಯ್ಯುವ ಅಗತ್ಯವಿಲ್ಲದೇ, ಪ್ರಯಾಣ ಅಥವಾ ತುರ್ತು ಸಂದರ್ಭಗಳಲ್ಲಿಯೂ ಡಿಜಿಟಲ್ ಆಧಾರ್ ಬಳಸಲು ಇದು ಅನುಕೂಲಕರವಾಗಿದೆ.

ಬ್ಯಾಂಕ್ ಗ್ರಾಹಕರು, ಸರ್ಕಾರಿ ಸೇವೆಗಳ ಫಲಾನುಭವಿಗಳು, ವಿದ್ಯಾರ್ಥಿಗಳು, ಉದ್ಯೋಗ ಆಕಾಂಕ್ಷಿಗಳು, ಪ್ರವಾಸಿಗರು ಹಾಗೂ ಗುರುತು ಪರಿಶೀಲನೆ ನಡೆಸುವ ಸಂಸ್ಥೆಗಳು ಈ ಮಾರ್ಗಸೂಚಿಯನ್ನು ಗಮನಿಸಬೇಕು ಎಂದು ಯುಐಡಿಎಐ ತಿಳಿಸಿದೆ. ಸಾರ್ವಜನಿಕರು ತಮ್ಮ ಅನುಕೂಲಕ್ಕೆ ತಕ್ಕ ಯಾವುದೇ ಮಾದರಿಯ ಆಧಾರ್ ಬಳಸಬಹುದಾಗಿದ್ದು, ಸಂಸ್ಥೆಗಳು ಅದರ ಅಸಲಿಯತ್ತನ್ನು ಕ್ಯೂಆರ್ ಕೋಡ್ ಮೂಲಕ ಪರಿಶೀಲಿಸಬೇಕು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದಲ್ಲಿ ಪ್ರಶ್ನೆಗಳು ಉದ್ಭವಿಸಿದಾಗ ಪ್ರಧಾನಿ ಮೋದಿ ವಿದೇಶಕ್ಕೆ ಹೋಗುತ್ತಾರೆ: ಪ್ರಿಯಾಂಕ್ ಖರ್ಗೆಬಳ್ಳಾರಿಯಲ್ಲಿ ಎನ್‌ಐಎ ದಾಳಿ; ಉಗ್ರ ಚಟುವಟಿಕೆಗಳ ಸಂಚುಮೇವು ತರಲು ತೆರಳಿದ್ದ ವೃದ್ಧೆಯ ಮೇಲೆ ಅತ್ಯಾಚಾರ, ಬರ್ಬರ ಹತ್ಯೆಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ಪತ್ನಿಯ ಬರ್ಬರ ಹತ್ಯೆವಾಯುದಾಳಿಗೆ ಪ್ರತಿಯಾಗಿ ಅಮೆರಿಕ ನೆಲೆಗಳ ಮೇಲೆ ಇರಾನ್ ಪ್ರತಿದಾಳಿಆಧಾರ ಯಾವ ಮಾದರಿಯಾದರೂ ಮಾನ್ಯ; ಎಲ್ಲ ಆವೃತ್ತಿಗಳಿಗೂ ಸಮಾನ ಕಾನೂನುಬದ್ಧ ಸ್ಥಾನಮಾನಅಂಬೋಲಿ ಘಾಟ್‌ನಲ್ಲಿ ಗುಡ್ಡ ಕುಸಿತನಾಳೆ ಪಿಯುಸಿ ಕಾಲೇಜುಗಳಿಗೂ ರಜೆಬೆಳಗಾವಿ, ಖಾನಾಪುರ ಮತ್ತು ನಿಪ್ಪಾಣಿ ತಾಲ್ಲೂಕಿನ ಶಾಲೆಗಳಿಗೆ ನಾಳೆ ರಜೆಕರ್ನಾಟಕದಲ್ಲಿ ಮಳೆ ಅಬ್ಬರ ಮುಂದುವರಿಕೆ: ಬೆಳಗಾವಿ ಸೇರಿ ೫ ಜಿಲ್ಲೆಗಳಿಗೆ ರೆಡ್ ಅಲರ್ಟ್; ಭೂಕುಸಿತದ ಎಚ್ಚರಿಕೆ